Sticky Post

ಕೇಡಿ ಮನಸ್ಸಿನ ನಿಘಂಟು

1: ಅಂಕೆಗೇಡಿತನ ಭಾಗ: 1 ಪ್ರವೇಶಿಕೆ ಮನಸ್ಸು ತಿಳಿದೋ, ತಿಳಿಯದೆಯೋ ಕೆಲವು ಗುಣಗಳನ್ನು ರೂಢಿ ಮಾಡಿಕೊಂಡುಬಿಡುತ್ತದೆ. ಈ ರೂಢಿಗತವಾದಂತಹ ಗುಣಗಳೇ ವ್ಯಕ್ತಿಯ ಆಲೋಚನೆಯ ಕ್ರಮವನ್ನು ರೂಪಿಸುವುದು, ವರ್ತಿಸುವುದು, ಭಾವಿಸುವುದು, ಗ್ರಹಿಸುವುದು ಮತ್ತು ಅವರ ಜೀವನ ಕ್ರಮವನ್ನು ನಿರ್ಧರಿಸುವುದು. ಒಟ್ಟಾರೆ ವ್ಯಕ್ತಿಯ ಬದುಕು ಉತ್ತಮ ಮಟ್ಟದಲ್ಲಿರಲು ಅಥವಾ ಹಾಳಾಗಲು ಕಾರಣ ಗುಣಗಳೇ. ವ್ಯಕ್ತಿಗಳಲ್ಲಿ ಖಿನ್ನತೆ, ಆತಂಕ, ಮರೆಯಲಾಗದ ನೋವು, ಭಾವನಾತ್ಮಕವಾದ ಅವಲಂಬನೆ, ಕುಟುಂಬಗಳಲ್ಲಿ ಜಗಳ, ಮನಸ್ತಾಪ, ಸಂಬಂಧಗಳಲ್ಲಿ ಒಡಕು, ಆತ್ಮಹತ್ಯೆಯ ಇಚ್ಛೆ, ಹೊಡೆದಾಟ, ದೋಷಾರೋಪಣೆ, ಬಗೆ ಹರಿಯದ ಬಿಕ್ಕಟ್ಟು, ಅನಗತ್ಯ ಭಯ, ಸ್ಥಿಮಿತದಲ್ಲಿರದ ಮನಸ್ಸು, ನಿಯಂತ್ರಿಸಿಕೊಳ್ಳಲಾಗದ ವರ್ತನೆಗಳು ಮತ್ತು ಕೆಲಸಗಳು, ವ್ಯಸನಗಳು, ನೆಮ್ಮದಿಯಿಲ್ಲದ … Continue reading ಕೇಡಿ ಮನಸ್ಸಿನ ನಿಘಂಟು

Sticky Post

ಲೇಖಕನನ್ನು ಪದಕೋಶದಲ್ಲಿ ತಡಕಾಡಬೇಕಾದಾಗ..!

~ ಸಾರಾಅಲಿ ಪರ್ಲಡ್ಕ ( ಬರಹಗಾರ್ತಿ) ಭಾಷೆ ಎನ್ನುವುದು ಇತಿಹಾಸ, ಸಂಸ್ಕೃತಿ, ಆಚಾರ ವಿಚಾರಗಳು ಹಾಗೂ ನಮ್ಮ ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ರೂಪಿಸುವ ಕೀಲಿಕೈ. ಕನ್ನಡ ಭಾಷೆ ಹಾಗೂ ಇಲ್ಲಿನ ಸಾಹಿತ್ಯದ ಮೆರುಗನ್ನು ವರ್ಣಿಸುವುದೆಂದರೆ ಅದು ಪದಗಳಿಗೆ ನಿಲುಕುವಂತದ್ದಲ್ಲ. ಕನ್ನಡದ ಮಣ್ಣಲ್ಲಿ ಹುಟ್ಟಿ ಬೆಳೆದ ನಾವುಗಳೇ ಧನ್ಯರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಾವು ಕನ್ನಡ ಭಾಷೆಯನ್ನು ಉಳಿಸಿಕೊಂಡರೆ ಕರ್ನಾಟಕದೊಳಗಿರುವ ನಮ್ಮ ಆಡು ಭಾಷೆಗಳಾದ ತುಳು, ಬ್ಯಾರಿ, ಕೊಂಕಣಿ ಹಾಗೂ ಇನ್ನಿತರ ಭಾಷಾ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಉಳಿಸಿಕೊಳ್ಳಬಹುದು. ಭಾಷಾ ಆಸಕ್ತಿಯೇ ಕುಂಠಿತವಾದರೆ ಅದರ ಸಾಹಿತ್ಯವು ಉಳಿಯುವ ಮಾತೆಲ್ಲಿಂದ ಬಂತು? … Continue reading ಲೇಖಕನನ್ನು ಪದಕೋಶದಲ್ಲಿ ತಡಕಾಡಬೇಕಾದಾಗ..!

Sticky Post

ಅನಿಯಮ ವಾಹನ ಚಲಾವಣೆಗೆ ತಡೆ ಬೀಳಬೇಕು

ಜ್ಯೋತಿ ಜಿ, ಮೈಸೂರು.(ಸಾಮಾಜಿಕ ಹೋರಾಟಗಾರ್ತಿ) ದ್ವಿಚಕ್ರ ವಾಹನ ಓಡಿಸುವಾಗ ಪ್ರಸ್ತುತ ಯುವ ಜನತೆಯಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ. ಕಾನೂನು ಬದ್ಧವಾಗಿ ಇದು ಅಪರಾಧವಾದರೂ ಕೂಡ ಮೋಜಿ ಮಸ್ತಿಗಾಗಿ ಅಥವಾ ಯಾವುದೋ ಅನಾವ್ಯಸಕವಾದ ವಿಷಯಗಳಿಗೆ ಜೋತು ಬಿದ್ದು ಜೀವನವನ್ನೇ ಪಾಳು ಮಾಡಿಕೊಳ್ಳುತ್ತೇವೆ. ಇಂತಹ ಘಟನೆಗಳಿಗೆ ಅಧಿಕೃತ ಕಾನೂನಾತ್ಮಕ ತಡೆ ಬೀಳಬೇಕಿದೆ. ಮೊದಲೆಲ್ಲಾ ನಾವು ಮೊಬೈಲ್ ಇಲ್ಲದೇ ಸುಗಮ ಜೀವನವನ್ನು ನಡೆಸುತ್ತಿದ್ದೆವು. ನಿಜಕ್ಕೂ ಒಂದು ರೀತಿಯ ಆ ಕಾಲಘಟ್ಟದಲ್ಲಿ ಸಂತೃಪ್ತಿಯ ಉತ್ತಮ ಬಾಂಧವ್ಯದ ಜೊತೆಗೆ ಸ್ನೇಹಮಯ ಜೀವನ ನಡೆಸುತ್ತಿದ್ದೆವು ಎನ್ನುವುದು ನೆನೆಕೆ. ಆಹಾ..! ಅದು ಎಂತಹ ಸುಂದರಮಯ ಜೀವನವಲ್ಲವೇ..? ಮದುವೆಯಾದ ಗಂಡು, ಹೆಣ್ಣು ಎತ್ತಿನ … Continue reading ಅನಿಯಮ ವಾಹನ ಚಲಾವಣೆಗೆ ತಡೆ ಬೀಳಬೇಕು

Sticky Post

ಹತ್ಯಾಕಾಂಡಗಳಿಗೆ ಬಾಗಿಲು ತೆರೆದು ನೀಡುತ್ತಿರುವ ಬೊಮ್ಮಾಯಿ ಆಳ್ವಿಕೆಯ ಕರ್ನಾಟಕ

✍️ಅಶ್ವಾನ್ ಸಾಧಿಕ್.ಪಿವಿದ್ಯಾರ್ಥಿ ಹೋರಾಟಗಾರರು ಕರ್ನಾಟಕದಲ್ಲಿ ಹತ್ತು ದಿನಗಳಲ್ಲಿ ಮೂರು ಕೊಲೆಗಳು ನಡೆದಿದೆ. ಮೂರು ಕೊಲೆಗಳಿಗೆ ಸಂಘಪರಿವಾರವೇ ನೇರ ಕಾರಣವೆಂದರೆ ತಪ್ಪಿಲ್ಲ. ದೇಶದ ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ಬೊಮ್ಮಾಯಿಯವರು, ಕೇಶವ ಕೃಪದ ಕೈಗೊಂಬೆಯೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಮೂರು ಕೊಲೆ ಪ್ರಕರಣಗಳಲ್ಲಿ ಸರಕಾರದ ತಾರತಮ್ಯ ಧೋರಣೆಯು ಕರ್ನಾಟಕವನ್ನೇ ನಾಚಿಸಿದೆ. ಜೊತೆಗೆ ಕನ್ನಡ ಮಾಧ್ಯಮಗಳ ಮುಸ್ಲಿಂ ವಿರೋಧಿ ನೀಚ ಮನಸ್ಥಿತಿಯೂ ಬಹಿರಂಗಗೊಂಡಿದೆ. ಈ ಹಿಂದೆಯೂ ಪ್ರಮುಖವಾಗಿ ಕರಾವಳಿ ಹಾಗು ಇತರೆ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ದೈಹಿಕವಾಗಿ ಮಾನಸಿಕವಾಗಿ ಹಲವು ದಾಳಿಗಳಾಗಿವೆ, ರಾಜ್ಯದಲ್ಲಿ ಪ್ರಸಕ್ತ ನಡೆಯುತ್ತಿರುವ ಸನ್ನಿವೇಶ ಹಾಗು ರಾಜ್ಯದಲ್ಲಿ ಕಳೆದೊಂದು … Continue reading ಹತ್ಯಾಕಾಂಡಗಳಿಗೆ ಬಾಗಿಲು ತೆರೆದು ನೀಡುತ್ತಿರುವ ಬೊಮ್ಮಾಯಿ ಆಳ್ವಿಕೆಯ ಕರ್ನಾಟಕ

Sticky Post

ಭಿಕ್ಷಾಟನೆಗೆ ಕೊನೆ ಎಂದು?

✍️ಜ್ಯೋತಿ.ಜಿ (ಉಪನ್ಯಾಸಕಿ, ಮೈಸೂರು) ಬಡತನ ಮುಕ್ತ ದೇಶ ನಿರ್ಮಾಣದ ಗುರಿ ಹೊಂದಿರುವ ನಮ್ಮ ದೇಶದಲ್ಲಿ ಭಿಕ್ಷಾಟನೆ ಮಾತ್ರ ಇನ್ನೂ ನಡೆಯುತ್ತಲೇ ಇದೆ. ಒಂದು ಕಡೆ ನಾವು ತಾಂತ್ರಿಕತೆಯಲ್ಲಿ,ಅವಿಷ್ಕಾರದಲ್ಲಿ ಮುಂದುವರಿದ್ದೇವೆ ಎಂದು ಬಹಳಷ್ಟು ರಾಜಕೀಯ ನಾಯಕರು ತಮ್ಮ ಪ್ರದರ್ಶನಗಳನ್ನು ಮಾಡುತ್ತಾರೆ. ಆದರೆ ತಮ್ಮ ಸುತ್ತ ಮುತ್ತಲಿನ ರಾಜಕೀಯ ನಾಯಕರಿಗೆ ಈ ಭಿಕ್ಷಾಟನೆಯ ಪರಿವೇ ಇರುವುದಿಲ್ಲ. ಸಿಗ್ನಲ್‌‌ಗಳಲ್ಲಿ,ಬಸ್ಸ್‌ ನಿಲ್ದಾಣಗಳಲ್ಲಿ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಹಾಗೂ ಇನ್ನಿತರ ಸಾರ್ವಜನಿಕ ಪ್ರದೇಶಗಳಲ್ಲಿ ಭಿಕ್ಷುಕರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನೋಡುತ್ತಲೇ ಇರುತ್ತೇವೆ ಚಿಕ್ಕ ವಯಸ್ಸಿನ ಮಕ್ಕಳು ಹಣ ಕೊಡುವವರೆಗೂ ಬಿಡುವುದಿಲ್ಲ ಕೆಲವೊಮ್ಮೆ ಕಾಲಿಗೆ ಬಂದು ಎರಗುತ್ತಾರೆ. ನಾನು … Continue reading ಭಿಕ್ಷಾಟನೆಗೆ ಕೊನೆ ಎಂದು?

Sticky Post

ಗಾಂಧಿ ಹುತಾತ್ಮ ದಿನ ಜನವರಿ 30

ಹಿಂಸೆಯನ್ನು ಖಂಡಿಸಿದ ಮಹಾತ್ಮರನ್ನು ಹಿಂಸೆಯಿಂದಲೇ ಕೊನೆಗೊಳಿಸಿದ ದಿನ ಅಹಿಂಸೆ ಮನುಕುಲದ ದೊಡ್ಡ ಶಕ್ತಿ. ಮನುಷ್ಯ ಬದ್ಧಿವಂತಿಕೆಯಿಂದ ರೂಪಿಸಿಕೊಂಡ ವಿನಾಶಕಾರಿ ಶಕ್ತಿಶಾಲಿ ಅಸ್ತ್ರಕ್ಕಿಂತ ಇದು ಪ್ರಬಲವಾಗಿದೆ. Continue reading ಗಾಂಧಿ ಹುತಾತ್ಮ ದಿನ ಜನವರಿ 30

ಹಸಿವಿನ ದೇಶದಲ್ಲಿ ಆಹಾರದ ರಾಜಕೀಯ – ಭಾಗ – 01

ಮಲಿನ ಆಹಾರ ಮತ್ತು ಮೈಲಿಗೆಯ ಮನಸ್ಸು ✍️ ಯೋಗಿಶ್ ಮಾಸ್ಟರ್, ಬರಹಗಾರರು ಭಾಷೆ, ಬಣ್ಣ, ಸಂಸ್ಕೃತಿ, ವರ್ಗವೇ ಮೊದಲಾದ ವಿಷಯಗಳಿಂದ ಒಬ್ಬ ಮತ್ತೊಬ್ಬನ ಮೇಲೆ, ಒಂದು ವರ್ಗ ಮತ್ತೊಂದು ವರ್ಗದ ಮೇಲೆ, ಒಂದು ಜಾತಿ ಮತ್ತೊಂದು ಜಾತಿಯ ಮೇಲೆ ತನ್ನ ಯಜಮಾನಿಕೆಯನ್ನು ಸ್ಥಾಪಿಸಿಕೊಂಡು ಮೆರೆಯುವ ಮೇಲರಿಮೆಯ ರೋಗ ನಮ್ಮ ದೇಶಕ್ಕೇನೂ ಹೊಸತಲ್ಲ. ಅಂತಹ ಆಹಾರವೂ ಕೂಡಾ ಒಂದು.ಒಂದಂತೂ ಸ್ಪಷ್ಟ. ಆಹಾರದ ವಿಷಯದಲ್ಲಿ ಭಾರತದಲ್ಲಾಗಲಿ, ಈಗ ನಮ್ಮ ಕರ್ನಾಟಕದಲ್ಲಾಗಲಿ ನಡೆಯುತ್ತಿರುವ ಚರ್ಚೆಗಳು ಸಾಮಾನ್ಯ ತಿಳುವಳಿಕೆಯ ವ್ಯಾಪ್ತಿಯಲ್ಲಿ ನೋಡಲು ಹೋದರೆ ‘ಅದು ಬೇಡದ್ದು’. ಹಸಿವಿನಿಂದ ಮುಕ್ತವಾಗಿರದ ದೇಶದಲ್ಲಿ ಆಹಾರದ ವಿಷಯದಲ್ಲಿ ಆಟವಾಡುವುದು ಅಮಾನವೀಯವೂ ಹೌದು … Continue reading ಹಸಿವಿನ ದೇಶದಲ್ಲಿ ಆಹಾರದ ರಾಜಕೀಯ – ಭಾಗ – 01

ತಿರಂಗ ಬಾನೆತ್ತರ ಹಾರಿದರೆ ನಾನು ಸ್ವತಂತ್ರನೇ?

✍🏻 ಎಮೆಸ್ಸೆ ಸವಣೂರು ಬಾಪುವಿನ ಅಹಿಂಸೆಗೆ ಮಣಿದು ಸ್ವತಂತ್ರಗೊಂಡ ದೇಶದಲ್ಲೇಗೋಡ್ಸೆಯ ಹಿಂಸೆಯ ಗುಂಡಿಗೆಬಲಿಯಾದ ಗಾಂಧಿ ಇಲ್ಲಿ ಸ್ವತಂತ್ರನೇ? ಬ್ರಿಟಿಷರ ವಿರುದ್ಧ ಉಪ್ಪಿನ ಸತ್ಯಾಗ್ರಹಕ್ಕೂ ನ್ಯಾಯ ಸಿಗುತ್ತಿದ್ದ ದೇಶದಲ್ಲಿಂದುಪ್ರಭುತ್ವದ ಎದುರು ಲಾಠಿ, ಪಿರಂಗಿಗೆಎದೆಯೊಡ್ಡಿದರೂ ನ್ಯಾಯ ಸಿಗದಾಗಿದೆ. ಪ್ರಭುತ್ವ ಪಕ್ಷದ ವಿರುದ್ದದ ಭಿನ್ನಾಭಿಪ್ರಾಯಕ್ಕೂ ದಾಖಲಾಗುವ ಯುಎಪಿಎ,ಭಿನ್ನತೆಯ ಧ್ವನಿಯನ್ನು ಇಡಿ, ಸಿಬಿಐ ಮೂಲಕ ಮಣಿಸುವಾಗ ನಾನು ಸ್ವತಂತ್ರನೇ? ಭೂಮಿ ಉಳುವ ರೈತನ ಬಸಿರು ಬರಿದಾಗಿ ನೆತ್ತರ ಕಣ್ಣೀರು ಹರಿವಾಗ,ಪ್ರಭುತ್ವ ಪೋಷಕ ಕಾರ್ಪೋರೇಟ್ ಕುಳಗಳಆಸ್ತಿ ಅಂತಸ್ತಿನ ಹಂತ ಮೇಲೆರುತ್ತಿದೆ. ಆಕ್ಸಿಜನ್ ಸಿಗದೆ ಉಸಿರುಗಟ್ಟಿ ಸತ್ತು ಗಂಗೆಯಲ್ಲಿ ತೇಲಿ ಬರುವುದನ್ನುಸಾವಿರ ಕೋಟಿಯ ಪ್ರತಿಮೆಯೂಸಹ ಬೆರಗಾಗಿ ನೋಡುತ್ತಿದೆ. ಹೆಣ್ಣು ಮಧ್ಯರಾತ್ರಿ … Continue reading ತಿರಂಗ ಬಾನೆತ್ತರ ಹಾರಿದರೆ ನಾನು ಸ್ವತಂತ್ರನೇ?

ಮಹಿಳಾ‌ ಹೋರಾಟ ಅನಿವಾರ್ಯ!

-ರಿಯಾಝ್ ಪುತ್ತೂರು ಗುಜರಾತಿನ ಆ ಮಣ್ಣಿನಲ್ಲಿ ಕ್ರೂರತೆಯ ಮೆರೆದವರೂ ಇವರೇ….ಜೀವಂತ ಸುಟ್ಟು ಹಾಕಿ ವಿಘ್ನ ಸಂತೋಷ ಪಟ್ಟವರೂ ಇವರೇ….ನೀ ಅಂಗಲಾಚಿ ಬೇಡಿದರೂಬಿಡಲಿಲ್ಲವಲ್ಲ ನಿನ್ನ….ಅಂದು ನಿನ್ನ ಧ್ವನಿಯ ದಫನ ಮಾಡ ಹೊರಟವರೂ ಇವರೇ… ನೀ ಉಡುವ ಬಟ್ಟೆಗೆತಕರಾರು ಎತ್ತಿದವರೂ ಇವರೇ….ನಿನ್ನ ಹಕ್ಕುಗಳ ಮಾಲೆಗೆಕತ್ತರಿ ಹಾಕಿದವರೂ ಇವರೇ‌….ಇಂದು ನೀ ತಲೆ ಎತ್ತಿ ನಿಲ್ಲುವಾಗನಿನ್ನ ದಫನ ಮಾಡ ಹೊರಟವರೂ ಇವರೇ… ನಿನ್ನ ಇತಿಹಾಸದುದ್ದಕ್ಕೂ ಮನುಸ್ಮೃತಿಯ ಹೇರಿದಮನಿಸ ನೋಡಿದವರೂ ಇವರೇ…ಭೇಟಿ ಬಚಾವೋ ಎನ್ನತ್ತಾ….ಕತ್ತು ಹಿಸುಕಿದವರೂ ಇವರೇ…..ಹೊಟ್ಟೆಗೆ ತ್ರಿಶೂಲವ ತಿವಿದುನಿನ್ನ ಸಮುದಾಯವ ದಫನ ಮಾಡ ಹೊರಟವರೂ ಇವರೇ…. ಜಗತ್ತು ಕಂಡು ಕೇಳರಿಯದ ಕನಸುಗಳ ಹೊತ್ತುಊರು ಕೇರಿಗಳ ಗಡಿಯನು ದಾಟಿನೀ … Continue reading ಮಹಿಳಾ‌ ಹೋರಾಟ ಅನಿವಾರ್ಯ!

ಅವಳ ಧ್ವನಿ

✍️ಸಲ್ಮಾ ಮಂಗಳೂರು ಉದುರಿದ ಎಲೆಯಡಿಧ್ವನಿಯೊಂದರ ಸಮಾಧಿ ಅಲುಗಾಡಿತು..ಧರ್ಮ ಪುರೋಹಿತನ ಫರಮಾನೊಂದುಅಪ್ಪಳಿಸಹತ್ತಿತು ಗುರಿಕಾರನಾಗಿ .. ಅದು ಅವಳ ಧ್ವನಿಸೀಮಾತೀತ ಚೀತ್ಕಾರ.. ಮನಮುರಿದ ಹಾಡುಹಕ್ಕಿಕನಸುಕೆಂಡಗಳ ಹೆಕ್ಕಿತನ್ನ ಧ್ವನಿಯ ಹಂತಕರ ಜಾಡಿನಲಿತ್ತು..ಸ್ವತಃ ಭಸ್ಮವಾಗುವುದರೊಳಗೆ…. ಅದು ಅವಳ ಧ್ವನಿಜಾತ್ಯತೀತ ಅಂಧಕಾರ .. ಕುದಿವ ಬಾಣಲೆಯ ಎದೆಯೊಳಗಿಟ್ಟು,ಹದವಾಗಿ ನಗುವು ಮುಸುಕಲಿ..ಗೀಜಗವ ಹಿಮ್ಮೆಟ್ಟಿಸಲಿ ಪುಟ್ಟಹಕ್ಕಿಯು ಹಿಂಡಾಗಿ..‘ನಮ್ಮ’ ಧ್ವನಿ ಬಾನಗುಮ್ಮಟಕೇರಲಿ… Continue reading ಅವಳ ಧ್ವನಿ