ಕನ್ನಡಿಗೆ 20000+ ಓದುಗರು

ಕನ್ನಡಿ ಲೇಖನಿಗೊಂದು ವೇದಿಕೆಯು ಪ್ರಾರಂಭವಾಗಿ ಕೆಲವೇ ಸಮಯಗಳಲ್ಲಿ 20000+ ಅಧಿಕ ಓದುಗರನ್ನು ಒಳಗೊಂಡಿದೆ. ಈ ಓದುಗರಲ್ಲಿ ನೀವು ಕೂಡ ಒಬ್ಬರು. ನಿಮ್ಮ ಈ ಪ್ರೀತಿ ಸದಾ ಈ ಕನ್ನಡಿಯೊಂದಿಗೆ ಇರಲಿ. ನೀವು ಕೂಡ ನಮ್ಮ ತಾಣದಲ್ಲಿ ಒಬ್ಬರು ಲೇಖಕರಾಗಿ ಗುರುತಿಸಕೊಳ್ಳಬಹುದು. ನಿಮ್ಮ ಬರಹವನ್ನು ಈ ಕೆಳಗಿನ ವಾಟ್ಸಾಪ್ ನಂಬರಿಗೆ ಕಳುಹಿಸಿ. 8549912487, 78990 91715 Continue reading ಕನ್ನಡಿಗೆ 20000+ ಓದುಗರು

ಶಿಕ್ಷಕರ ಮೌನ

✍ ವಿವೇಕಾನಂದ ಹೆಚ್.ಕೆ. ಇತ್ತೀಚೆಗೆ ಮಂಡ್ಯ ಜಿಲ್ಲೆಯ ಶಾಸಕರೊಬ್ಬರು ಒಂದು ಶಾಲೆಯ ಮುಖ್ಯೋಪಾಧ್ಯಾಯರಿಗೋ ಅಥವಾ ಪ್ರಾಂಶುಪಾಲರಿಗೋ ಸಾಕಷ್ಟು ಜನಗಳ ಮುಂದೆ ಕಪಾಳಕ್ಕೆ ಹೊಡೆಯುತ್ತಾರೆ. ಅದು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಕಡೆ ಪ್ರಸಾರವಾಗುತ್ತದೆ. ಸರಿ ತಪ್ಪು ಏನೇ ಇರಲಿ ಯಾರದೇ ಇರಲಿ ಒಬ್ಬ ಶಿಕ್ಷಕರಿಗೆ ಜನ ಪ್ರತಿನಿಧಿಯೊಬ್ಬರು ಬಹಿರಂಗವಾಗಿ ಹೊಡೆಯುತ್ತಾರೆ ಎಂದರೆ ಅದು ಒಂದು ಗಂಭೀರ ಅಪರಾಧ. ಈ ದೇಶದ ಕಾನೂನು, ಇಲ್ಲಿನ ಪೋಲೀಸರು, ಇಲ್ಲಿನ ಅಧಿಕಾರಿಗಳು ಮತ್ತು ಸಂಬಂಧಪಟ್ಟವರು ಈಗಾಗಲೇ ಶಾಸಕರನ್ನು ಬಂಧಿಸಿ ಕ್ರಮಕೈಗೊಳ್ಳಬೇಕಾಗಿತ್ತು. ಮಾಧ್ಯಮಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸುದ್ದಿಗಳನ್ನು ಪ್ರಸಾರ ಮಾಡಿ ಸರ್ಕಾರದ ಮೇಲೆ ಒತ್ತಡ … Continue reading ಶಿಕ್ಷಕರ ಮೌನ

ಅಸ್ತಿತ್ವವನ್ನು ಕೆಡವಿದ ಬುಲ್ಡೋಝರ್

ಭಾಗ :6 ರಿಯಾಝ್ ಅಂಕತಡ್ಕಪತ್ರಿಕೋದ್ಯಮ ವಿದ್ಯಾರ್ಥಿ, ಮಂಗಳೂರು ವಿಶ್ವವಿದ್ಯಾನಿಲಯ “ಭಾರತದಲ್ಲಿ ಜೀವಿಸಬೇಕಾದರೆ ಜೈ ಶ್ರೀರಾಮ್ ಹೇಳಬೇಕು” ಎನ್ನುವ ಘೋಷಣೆಗಳನ್ನು ಕೂಗುತ್ತಾ, ಕೈಯಲ್ಲಿ ಕತ್ತಿ, ಖಡ್ಗ, ಪಿಸ್ತೂಲ್ ಗಳನ್ನು ಹಿಡಿದುಕೊಂಡು ಮೆರವಣಿಗೆ ನಡೆಸುವ, ಮಸೀದಿಗಳ ಮುಂದೆ ಇಸ್ಲಾಮಿನ, ಮುಸಲ್ಮಾನರ ವಿರುದ್ಧ ಕೇಕೆಗಳನ್ನು ಹಾಕುವ ಭಯೋತ್ಪಾದಕರ ಗುಂಪನ್ನು ನೀವು ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಕಂಡಿರಬಹುದು. ಇದು ಎಲ್ಲಾ ಪ್ರಜೆಗಳಿಗೂ ತಮ್ಮ ತಮ್ಮ ಧರ್ಮವನ್ನು ಆಚರಿಸುವ, ಅನುಸರಿಸುವ ಮತ್ತು ಪ್ರಚಾರಪಡಿಸುವ ಸಮಾನ ಅವಕಾಶ ನೀಡಿದಂತಹಾ ಧರ್ಮನಿರಪೇಕ್ಷ ದೇಶವಾದ ಭಾರತದಲ್ಲಿ ಎಂಬುದು ಆಘಾತಕಾರಿ ಮತ್ತು ಬೇಸರದ ಸಂಗತಿಯಾಗಿದೆ. ಗಲಭೆಕೋರರನ್ನು ತಡೆದು ಕಟ್ಟಿಹಾಕಬೇಕಾದ ಸರ್ಕಾರ ಮಾತ್ರ ತಮ್ಮ ಉಳಿವಿಗಾಗಿ, … Continue reading ಅಸ್ತಿತ್ವವನ್ನು ಕೆಡವಿದ ಬುಲ್ಡೋಝರ್

ನನ್ನ ಜನ್ಮ ದಿನ ಹೇಗೆ ಆಚರಿಸಲಿ ?

ಬರಹಗಾರರು : ಹರ್ಷದ್ ಎಸ್.ಕೆ. ಪಾದದಡಿ ಸ್ವರ್ಗವನ್ನಿಟ್ಟು,ಸಹನೆಯ ಕಟ್ಟೆಯ ಒಡಲಲ್ಲಿ ಹೊತ್ತು. ಹೊಗಳಿಕೆಗೆ ನಿಲುಕದ,ಬರವಣಿಗೆಗೆ ಸಾಟಿಯಿಲ್ಲದ ಬರೆದಷ್ಟು ಬರಿಯಬೇಕೆಂದೆನಿಸುವ, ಹಾಡಿದಷ್ಟು ಹಾಡಬೇಕೆಂದೆನಿಸುವ ಪದವೆ ಅಮ್ಮ ಉದರದ ಚಲನೆಯ ಅರಿತುಕಂದನ ಬರುವಿಕೆಯ ತಿಳಿದುಕಾತರದಿ ಕಾದು ನೀ ಕಾಪಿಟ್ಟು ಲೋಕದ ಭಯವಿಲ್ಲದಂತೆ, ಗರ್ಭದಲ್ಲಿ ನೀನು ಬೆಚ್ಚಗಿನ ಸುರಕ್ಷೆ ಕೊಟ್ಟಾಗ ಬಗೆಬಗೆಯ ಖಾದ್ಯವ ತ್ಯಜಿಸಿಕಂದನ ಆರೈಕೆಯ ಸಲುವಾಗಿಚುಚ್ಚಿಸಿಕೊಂಡು ಸೂಜಿ, ಔಷಧಿ ಮನುಕುಲ ಶ್ರೇಷ್ಟರಂತೆ ಧೀರ,ಶೂರ,ಜಾಣ ನಾನಾಗ ಬೇಕೆಂದು ಕನಸು ಕಂಡಾಗ ಪ್ರಪಂಚಕ್ಕೆ ನಾನು ಬರುವ ಮೊದಲು ಪ್ರಪಂಚ ಏನೆಂದು ನೀ ನನಗೆ ತಿಳಿಸಿಕೊಡುತ್ತಿದ್ದಾಗ ಗಾಢಾ ನಿದ್ದೆಯಲ್ಲಿ ನೀನಿರುವೆ ಎಂದು ತಿಳಿಯದೆ ನಾ ನಿನಗೆ ಕೊಡುತ್ತಿದ್ದ ತೊಂದರೆ, … Continue reading ನನ್ನ ಜನ್ಮ ದಿನ ಹೇಗೆ ಆಚರಿಸಲಿ ?

ಧರೆಗುರುಳಿವೆ ಮಾನವೀಯತೆ

✍🏻 ಎಮೆಸ್ಸೆ ಸವಣೂರು ನಿನಗಿದು ಕ್ಷಣಮಾತ್ರದ ಹೊಡೆತನನ್ನ ಜೀವಮಾನದ ಬೆವರಿನ ದುಡಿತ.ಮನುಷ್ಯತ್ವವೇ ಕಳೆದ ಹೋದ ನಿನ್ನಲ್ಲಿಮನದ ನೋವ ತೋಡಿಕೊಂಡರೇನಿಲ್ಲಿ. ಒಂದೈದು ನಿಮಿಷ ತಡೆಯಬಾರದಿತ್ತೆ?ಹನಿ ನೀರಿನ ಸೀಸೆಯ ಬದಿಯಲ್ಲಿಡುತ್ತಿದ್ದೆ.ನೀ ದಣಿದಾಗ ಕುಡಿಯಲು ಹಿಂಜರಿಯದಿರು,ನೀನೊಮ್ಮೆಯೂ ಬಾಯಾರಿಕೆಯಿಂದ ಕಂಗಾಲಾಗದಿರು. ನಿನಗಿಂತಲೂ ಮುಂಚೆ ಮೆರದವರುಸರ್ವಾಧಿಕಾರವ ತೋರಿ ಜರೆದವರುಒಂದೇ ಕ್ಷಣದಲ್ಲಿ ಗತಿಸಿ ಹೋದ ಮೇಲೆನಿನ್ನನ್ನು ಬಿಡಬಹುದೇ ಭಗವಂತನ ಲೀಲೆ ಬ್ರೂಣವ ಚುಚ್ಚಿ ಕೇಕೆ ಹಾಕಿದವರುಗರ್ಭವ ಸೀಳಿ ಪೆಟ್ರೋಲ್ ಸುರಿದವರುಬಡವನ ಹೊಟ್ಟೆಗೆ ಕಲ್ಲೆಸದವರುತುಂಡು ಇಟ್ಟಿಗೆಯ ಧರೆಗೆ ಉರುಳಿಸಿದವರು ಕಾಲಚಕ್ರ ತಿರುಗಿದಾಗ ಎಲ್ಲವ ನೆನಪಿಸುವೆವುನಿನ್ನ ಸೋಲಿಸಿ ಮಂಡಿಯೂರಿ ನಿಲ್ಲಿಸುವೆವುಫರೋವನ ಪೌರುಷ ಮುಳುಗಿಸಿದ ಹಾಗೆನಂದಿದೆ ನಂರೂದನ ಅಗ್ನಯ ಬೇಗೆ ಅಧಿಕಾರದ ಕೋಟೆಗಳೇ ಧರೆಗುರುಳಿವೆಅಹಂಕಾರದ … Continue reading ಧರೆಗುರುಳಿವೆ ಮಾನವೀಯತೆ

ನಿನ್ನಾಸೆಯೂ ನೆರವೇರಲಿ..!

✍ ಸಿರಾಜ್ ಗಡಿಯಾರ್ ದ್ವೇಷ ಭಾಷಣದಿಂದ ಚಪ್ಪಾಳೆ ಗಿಟ್ಟಿಸಿಕೊಂಡವನೆ ಕೇಳಿಲ್ಲಿನಿನ್ನಾಸೆಯೂ ನೆರವೇರಲಿಘನಘೋರ ಕಲಹವೊಂದು ನಡೆದು ಬಿಡಲಿಹೆಣಗಳ ರಾಶಿಯಲಿ ನಿನ್ನ ಮಕ್ಕಳ ದೇಹವಿರಲಿಧರ್ಮ ರಕ್ಷಿಸಲು ಇಷ್ಟಾದರು ಮಾಡಲಾರೆಯಾ …? ಖುರ್ಚಿ ಉಳಿಸುವ ಉಮೇದಿಗೆಪ್ರಜೆಗಳ ನಡುವೆ ತಂದಿಕ್ಕುವಚತುರ ರಾಜಕಾರಣಿಯೇನಿನ್ನಾಸೆಯೂ ನಡೆದುಬಿಡಲಿಬೀಸಿ ಬರುವ ಕತ್ತಿಯೊಂದುನಿನ್ನ ಮಕ್ಕಳ ಕತ್ತು ಸೀಳಲಿನಿನ್ನ ಗೆಲುವಿಗೆ ಅವರ ನೆತ್ತರಿನದ್ದೇಅಭಿಷೇಕವಾಗಲಿ . ಎಲ್ಲವನ್ನು ಸವಿದು ಆಳುವವನಅಂಡು ನೆಕ್ಕುವ ಮಾಧ್ಯಮವೇನಿನ್ನಾಸೆಯೂ ನೆರವೇರಲಿಬದುಕು ಕಟ್ಟಲಾಗದೆ ಬೀದಿಗೆ ಬಿದ್ದಜನರ ಗುಂಪಿನಲಿನಿನ್ನ ಮನೆಯ ಮಕ್ಕಳೂ ತಟ್ಟೆ ಹಿಡಿದಿರಲಿ . ಅನ್ಯಾಯ ನಡೆದಾಗಲೂಅಮಾಯಕರಿಗೆ ಶಾಂತಿ ಮಂತ್ರವ ಉಪದೇಶಿಸುವಬುದ್ದಿ ಜೀವಿ ಚಿಂತಕನೆನಿನ್ನಾಸೆಯೂ ನೆರವೇರಲಿದಮನಿತರ ದೀನ ರೋಧನೆಯಲಿನಿನ್ನ ಮನೆಯ ಮಕ್ಕಳ ದನಿಯೂನಿನ್ನ ಕಿವಿತಾಕಲಿ. … Continue reading ನಿನ್ನಾಸೆಯೂ ನೆರವೇರಲಿ..!

ಪೂರ್ವಜರು ಮಾಡಿದ ಅಪರಾಧಕ್ಕಾಗಿ ಇವರನ್ನೀಗ ನಾವು ದ್ವೇಷಿಸಬೇಕೇ?

✍ ರವಿಕಿರಣ್ ರೈ, ಕದ್ರಿ, ಮಂಗಳೂರು ಆಗಿನ ಮುಸ್ಲಿಮರ ಪೂರ್ವಜರು ನವಾಬ ಸುಲ್ತಾನರ ಸೇನೆಯಲ್ಲಿದ್ದುಕೊಂಡು ಹಿಂದೂ ದೇವಸ್ಥಾನಗಳನ್ನು ಲೂಟಿ ಹೊಡೆದಿದ್ದಾರೆ, ಅದಕ್ಕಾಗಿ ಈಗಿನ ಮುಸ್ಲಿಮರನ್ನೂ ಹಿಂದೂ ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡಲು ಬಿಡುತ್ತಿಲ್ಲ ಎಂಬ ವಿವರಣೆ ಹಿಂದುತ್ವ ಸಂಘಟನೆಗಳದ್ದು. 1665ರಲ್ಲಿ ನಮ್ಮ ಕುಂದಾಪುರ ತಾಲೂಕಿನ ಬಸರೂರು ಒಂದು ದೊಡ್ಡ ಬಂದರಾಗಿದ್ದು ಅಲ್ಲಿ ಅರಬಿಗಳು, ಪೋರ್ಚುಗೀಸರು ಮತ್ತು ಸ್ಥಳೀಯ ಜೈನರು, ನಾಡವರು ವಿದೇಶದೊಂದಿಗೆ ಭಾರೀ ವ್ಯಾಪಾರ ಮಾಡುತ್ತಿದ್ದರು. ಬಸರೂರು ಬಂದರ್‌ನಿಂದ ದೊಡ್ಡ ಪ್ರಮಾಣದಲ್ಲಿ ಕರಿಮೆಣಸು, ಮಸಾಲೆ ಪದಾರ್ಥ ಮತ್ತು ಅಕ್ಕಿ ಅರಬಿ ದೇಶಕ್ಕೆ ನಿರ್ಯಾತವಾಗುತ್ತಿತ್ತು. ಆ ಸಮಯದಲ್ಲಿ ಬಸರೂರು ಅತ್ಯಂತ ಸಮೃದ್ಧ ಪ್ರದೇಶವಾಗಿತ್ತು. … Continue reading ಪೂರ್ವಜರು ಮಾಡಿದ ಅಪರಾಧಕ್ಕಾಗಿ ಇವರನ್ನೀಗ ನಾವು ದ್ವೇಷಿಸಬೇಕೇ?

Brave heroes of the Nation

✍Ifrath Zaheema The political prisoner,Rauf Shareef is indeed, a great man! In spite of the wife being pregnant, the man just didn’t stand at the back but rather went in the forefront to send his condolences to the rape-victim’s family. The father hasn’t seen his daughter for once. You are being ruthless, depriving the right of seeing his daughter. What a inhumane torture? Oh baby … Continue reading Brave heroes of the Nation

ಹಲಾಲ್_ಹಾಗೆಂದರೇನು…?

✍ ಇಸ್ಮತ್_ಪಜೀರ್ ಪ್ರಸ್ತುತ ಭಾರತದಲ್ಲಿ ಮುಸ್ಲಿಮರ ವಿರುದ್ಧದ ಅಸಹನೆಯ ಭಾಗವಾಗಿ ಮುಸ್ಲಿಮರು ಮಾಂಸದ ಪ್ರಾಣಿಯನ್ನು ಕೊಯ್ಯುವಾಗ ಅನುಸರಿಸುವ ವಿಧಿ ವಿಧಾನವನ್ನೂ ಕಟುವಾಗಿ ವಿರೋಧಿಸುವ ಒಂದು ನೀಚ ಟ್ರೆಂಡ್ ಚಲಾವಣೆಯಲ್ಲಿದೆ. ಭಾರತದಲ್ಲಿ ಕೇರಳವೆಂದರೆ ಅತ್ಯಂತ ವಿದ್ಯಾವಂತ ಮತ್ತು ಪ್ರಜ್ಞಾವಂತರುಳ್ಳ ನಾಡೆಂದು ಪರಿಗಣಿಸಲಾಗುತ್ತದೆ. ಆದುದರಿಂದಲೇ ಅಲ್ಲಿ ಕೋಮುವಾದಿ ರಾಜಕೀಯದ ಬೆಳೆ ತೆಗೆಯಲು ಬಲಪಂಥೀಯ ಪ್ರತಿಗಾಮಿ ಶಕ್ತಿಗಳಿಗೆ ಸಾಧ್ಯವಾಗುತ್ತಿಲ್ಲ. ಕೇರಳದಲ್ಲಿ ಇಂದಿಗೂ ಬ್ರಾಹ್ಮಣೇತರ ಹಿಂದೂಗಳಲ್ಲಿ ಬಹುತೇಕರು ದನದ ಮಾಂಸವನ್ನು ಸೇವಿಸುತ್ತಾರೆ. ಅಲ್ಲಿ ಅದನ್ನು ಕೇವಲ ಒಂದು ಕಡಿಮೆ ಬೆಲೆಗೆ ಲಭ್ಯವಿರುವ ಪೌಷ್ಟಿಕಾಂಶವಿರುವ ಆಹಾರ ಎಂದಷ್ಟೇ ನೋಡಲಾಗುತ್ತದೆ. ಅಲ್ಲಿ ಈ ವರೆಗೂ ಗೋ ಪಾಲಿಟಿಕ್ಸ್‌ಗೆ ದೊಡ್ಡ ಮಣ್ಣನೆ … Continue reading ಹಲಾಲ್_ಹಾಗೆಂದರೇನು…?

ವಿಶ್ವ ಅರಣ್ಯ ದಿನ ಮಾರ್ಚ್ 21…….

✍ ವಿವೇಕಾನಂದ ಹೆಚ್.ಕೆ. ಬಹುಶಃ ಸೃಷ್ಟಿಯಲ್ಲಿ ನೀರಿನ ನಂತರ ಅತಿಹೆಚ್ಚು ಪ್ರಮಾಣದಲ್ಲಿ ಇರುವುದು ಸಸ್ಯ ಸಂಕುಲವೇ ಇರಬೇಕು. ಜೀವಸಂಕುಲದ ಉಸಿರಾಟದ ಮೂಲ ಆಮ್ಲಜನಕ ನೀಡುವುದು ಇದೇ ಸಸ್ಯರಾಶಿ….. ಜೀವ ಸಂಕುಲದ ಮೂಲಭೂತ ಅವಶ್ಯಕತೆಗಳಾದ ಗಾಳಿ ನೀರು ಆಹಾರದ ಪ್ರಮುಖ ಭಾಗ ಅರಣ್ಯ ಸಂಪತ್ತು. ಅಂತಹ ಮಹತ್ವದ ಅರಣ್ಯ ದಿನವಿದು….. ವ್ಯಾಲೆಂಟೈನ್ ಡೇ, ಫಾದರ್ ಡೇ, ಮದರ್‌ ಡೇ, ಹೋಲಿ ಫೆಸ್ಟಿವಲ್, ಯುಗಾದಿ, ರಂಜಾನ್, ಕ್ರಿಸ್ಮಸ್ ಎಂದು ಸಂಭ್ರಮದಿಂದ ಆಚರಿಸುವ ಹಿಂದಿನ ಶಕ್ತಿ ನಮ್ಮ ವನ ಸಂಪತ್ತು. ಆದರೆ ಕೃತಜ್ಞತೆ ಇಲ್ಲದ ಮನುಷ್ಯ ಪ್ರಾಣಿ ಇಷ್ಟು ದೊಡ್ಡ ಮಾಧ್ಯಮ ಪ್ರಪಂಚದಲ್ಲಿ ಅರಣ್ಯ ದಿನವನ್ನು … Continue reading ವಿಶ್ವ ಅರಣ್ಯ ದಿನ ಮಾರ್ಚ್ 21…….