ತಿರಂಗ ಬಾನೆತ್ತರ ಹಾರಿದರೆ ನಾನು ಸ್ವತಂತ್ರನೇ?

✍🏻 ಎಮೆಸ್ಸೆ ಸವಣೂರು ಬಾಪುವಿನ ಅಹಿಂಸೆಗೆ ಮಣಿದು ಸ್ವತಂತ್ರಗೊಂಡ ದೇಶದಲ್ಲೇಗೋಡ್ಸೆಯ ಹಿಂಸೆಯ ಗುಂಡಿಗೆಬಲಿಯಾದ ಗಾಂಧಿ ಇಲ್ಲಿ ಸ್ವತಂತ್ರನೇ? ಬ್ರಿಟಿಷರ ವಿರುದ್ಧ ಉಪ್ಪಿನ ಸತ್ಯಾಗ್ರಹಕ್ಕೂ ನ್ಯಾಯ ಸಿಗುತ್ತಿದ್ದ ದೇಶದಲ್ಲಿಂದುಪ್ರಭುತ್ವದ ಎದುರು ಲಾಠಿ, ಪಿರಂಗಿಗೆಎದೆಯೊಡ್ಡಿದರೂ ನ್ಯಾಯ ಸಿಗದಾಗಿದೆ. ಪ್ರಭುತ್ವ ಪಕ್ಷದ ವಿರುದ್ದದ ಭಿನ್ನಾಭಿಪ್ರಾಯಕ್ಕೂ ದಾಖಲಾಗುವ ಯುಎಪಿಎ,ಭಿನ್ನತೆಯ ಧ್ವನಿಯನ್ನು ಇಡಿ, ಸಿಬಿಐ ಮೂಲಕ ಮಣಿಸುವಾಗ ನಾನು ಸ್ವತಂತ್ರನೇ? ಭೂಮಿ ಉಳುವ ರೈತನ ಬಸಿರು ಬರಿದಾಗಿ ನೆತ್ತರ ಕಣ್ಣೀರು ಹರಿವಾಗ,ಪ್ರಭುತ್ವ ಪೋಷಕ ಕಾರ್ಪೋರೇಟ್ ಕುಳಗಳಆಸ್ತಿ ಅಂತಸ್ತಿನ ಹಂತ ಮೇಲೆರುತ್ತಿದೆ. ಆಕ್ಸಿಜನ್ ಸಿಗದೆ ಉಸಿರುಗಟ್ಟಿ ಸತ್ತು ಗಂಗೆಯಲ್ಲಿ ತೇಲಿ ಬರುವುದನ್ನುಸಾವಿರ ಕೋಟಿಯ ಪ್ರತಿಮೆಯೂಸಹ ಬೆರಗಾಗಿ ನೋಡುತ್ತಿದೆ. ಹೆಣ್ಣು ಮಧ್ಯರಾತ್ರಿ … Continue reading ತಿರಂಗ ಬಾನೆತ್ತರ ಹಾರಿದರೆ ನಾನು ಸ್ವತಂತ್ರನೇ?

ಅವಳ ಧ್ವನಿ

✍️ಸಲ್ಮಾ ಮಂಗಳೂರು ಉದುರಿದ ಎಲೆಯಡಿಧ್ವನಿಯೊಂದರ ಸಮಾಧಿ ಅಲುಗಾಡಿತು..ಧರ್ಮ ಪುರೋಹಿತನ ಫರಮಾನೊಂದುಅಪ್ಪಳಿಸಹತ್ತಿತು ಗುರಿಕಾರನಾಗಿ .. ಅದು ಅವಳ ಧ್ವನಿಸೀಮಾತೀತ ಚೀತ್ಕಾರ.. ಮನಮುರಿದ ಹಾಡುಹಕ್ಕಿಕನಸುಕೆಂಡಗಳ ಹೆಕ್ಕಿತನ್ನ ಧ್ವನಿಯ ಹಂತಕರ ಜಾಡಿನಲಿತ್ತು..ಸ್ವತಃ ಭಸ್ಮವಾಗುವುದರೊಳಗೆ…. ಅದು ಅವಳ ಧ್ವನಿಜಾತ್ಯತೀತ ಅಂಧಕಾರ .. ಕುದಿವ ಬಾಣಲೆಯ ಎದೆಯೊಳಗಿಟ್ಟು,ಹದವಾಗಿ ನಗುವು ಮುಸುಕಲಿ..ಗೀಜಗವ ಹಿಮ್ಮೆಟ್ಟಿಸಲಿ ಪುಟ್ಟಹಕ್ಕಿಯು ಹಿಂಡಾಗಿ..‘ನಮ್ಮ’ ಧ್ವನಿ ಬಾನಗುಮ್ಮಟಕೇರಲಿ… Continue reading ಅವಳ ಧ್ವನಿ

ನಿನ್ನಾಸೆಯೂ ನೆರವೇರಲಿ..!

✍ ಸಿರಾಜ್ ಗಡಿಯಾರ್ ದ್ವೇಷ ಭಾಷಣದಿಂದ ಚಪ್ಪಾಳೆ ಗಿಟ್ಟಿಸಿಕೊಂಡವನೆ ಕೇಳಿಲ್ಲಿನಿನ್ನಾಸೆಯೂ ನೆರವೇರಲಿಘನಘೋರ ಕಲಹವೊಂದು ನಡೆದು ಬಿಡಲಿಹೆಣಗಳ ರಾಶಿಯಲಿ ನಿನ್ನ ಮಕ್ಕಳ ದೇಹವಿರಲಿಧರ್ಮ ರಕ್ಷಿಸಲು ಇಷ್ಟಾದರು ಮಾಡಲಾರೆಯಾ …? ಖುರ್ಚಿ ಉಳಿಸುವ ಉಮೇದಿಗೆಪ್ರಜೆಗಳ ನಡುವೆ ತಂದಿಕ್ಕುವಚತುರ ರಾಜಕಾರಣಿಯೇನಿನ್ನಾಸೆಯೂ ನಡೆದುಬಿಡಲಿಬೀಸಿ ಬರುವ ಕತ್ತಿಯೊಂದುನಿನ್ನ ಮಕ್ಕಳ ಕತ್ತು ಸೀಳಲಿನಿನ್ನ ಗೆಲುವಿಗೆ ಅವರ ನೆತ್ತರಿನದ್ದೇಅಭಿಷೇಕವಾಗಲಿ . ಎಲ್ಲವನ್ನು ಸವಿದು ಆಳುವವನಅಂಡು ನೆಕ್ಕುವ ಮಾಧ್ಯಮವೇನಿನ್ನಾಸೆಯೂ ನೆರವೇರಲಿಬದುಕು ಕಟ್ಟಲಾಗದೆ ಬೀದಿಗೆ ಬಿದ್ದಜನರ ಗುಂಪಿನಲಿನಿನ್ನ ಮನೆಯ ಮಕ್ಕಳೂ ತಟ್ಟೆ ಹಿಡಿದಿರಲಿ . ಅನ್ಯಾಯ ನಡೆದಾಗಲೂಅಮಾಯಕರಿಗೆ ಶಾಂತಿ ಮಂತ್ರವ ಉಪದೇಶಿಸುವಬುದ್ದಿ ಜೀವಿ ಚಿಂತಕನೆನಿನ್ನಾಸೆಯೂ ನೆರವೇರಲಿದಮನಿತರ ದೀನ ರೋಧನೆಯಲಿನಿನ್ನ ಮನೆಯ ಮಕ್ಕಳ ದನಿಯೂನಿನ್ನ ಕಿವಿತಾಕಲಿ. … Continue reading ನಿನ್ನಾಸೆಯೂ ನೆರವೇರಲಿ..!

ಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ…

(ಪಂಚರಾಜ್ಯ ಚುನಾವಣೆ) ✍ಚಾಂದ್ ಸಲ್ಮಾನ್ ಕೇಂದ್ರದಲ್ಲಿ ಅಧಿಕಾರಕ್ಕೆರುವ ಮುಂಚೆ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಯಲ್ಲಿ 15 ಲಕ್ಷ ಹಾಕುವೆ ಎಂದು ಹುಸಿ ಸುಳ್ಳುಹೇಳಿ ಅಧಿಕಾರಕ್ಕೆ ಬಂದಿದನ್ನುಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ… ನೋಟ್ ಬ್ಯಾನ್ ಸಂದರ್ಭದಲ್ಲಿ ಬಡಜನ ಸರತಿ ಸಾಲಿನಲ್ಲಿ ನಿಂತು ನೋಟ್ ಬದಲಾವಣೆ ಮಾಡುವ ಸಮಯದಲ್ಲಿ ಎಷ್ಟೊಂದು ಜೀವಗಳು ಹೋಗಿವೆ ಇದನ್ನು ಕೂಡ ಕಂಡುಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ… ವಿದ್ಯಾವಂತ ಯುವಕರು ಉದ್ಯೋಗ ಕೇಳಿದರೆ ಉದ್ಯೋಗ ನೀಡದೆ ಪಕೋಡ ಮಾರಿ ಎಂದು ಹೇಳಿ ನಿರೋದ್ಯೋಗ ಸೃಷ್ಟಿಸಿದ ಫ್ಯಾಸಿಸ್ಟ ಸರಕಾರ,ಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ… … Continue reading ಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ…

“ದಿನವೊಂದು ಕಾಯುತಿದೆ”

✍ ಫಯಾಝ್ ದೊಡ್ಡಮನೆ ದಿನವೊಂದು ಕಾಯುತಿದೆಹೊಸ ಹುರುಪನು ಹೊತ್ತುಸವಿ ಕನಸಿನ ತುತ್ತು-ನೀಡಲು ದಾರಿ ಕಾಯುತಿದೆ ಹುಚ್ಚು ಮನಸುಗಳು ಮುಕ್ತ-ವಾಗಿ, ಸ್ವಚ್ಚ ಪ್ರೀತಿಯ ತೊಟ್ಟಿಲಾಗಿಜೋಗುಳ ಪದಗಳ ಮಾರ್ದನಿ-ಯಾಗಿ  ಬೀಸಿ ಕರೆಯಲಿವೆ ಸರ್ವಾಧಿಕಾರದ ಸೊಕ್ಕನು ಮುರಿದುಅಮಾನವೀಯ ಸಿದ್ಧಾಂತವ ಒಗೆದುರಕ್ಕಸರ ರೆಕ್ಕೆಯನು ಕಡಿದುಕೆಂಪು ನದಿಗಳು ಹರಿಯಲಿವೆ ನಾವು ನೀವು ಒಂದುಇನ್ನಿಲ್ಲ ಭೇದದ ಬಿಂದುನಮ್ಮೆಲ್ಲ ಕನಸುಗಳು ಒಂದು-ಗೂಡಲಿವೆ ಭೋರ್ಗರೆಯಲಿವೆ. ನಮ್ಮ ದೇಶ ನಮ್ಮ ಜನಮಣ್ಣು ಮಾತ್ರ ಅಲ್ಲವೇ ಅಲ್ಲಮಣ್ಣು- ಮಾತೆ ಗಾವರವಿಲ್ಲಒಂದು ಗೂಡಲಿವೆ ಮನಸುಗಳು ಒಂದು ಗೂಡಲಿವೆ ದಿನವೊಂದು ಕರೆಯುತಿದೆಬನ್ನಿರೆಂದು ಬರಲು ಶುರುವಿದಿಂದುಆಗಲಿ ಹೆಜ್ಜೆ ಹೆಜ್ಜೆಗಳಾಗಲಿಹೆಜ್ಜೆ ಸಪ್ಪಳ ಜೋರಿರಲಿ ದಿನವೊಂದು ಕಾಯುತಿದೆಹೊಸ ಹುರುಪನು ಹೊತ್ತು . Continue reading “ದಿನವೊಂದು ಕಾಯುತಿದೆ”

ಹೆಣ ಮುಚ್ಚುವ ಕಾಂಚನ

✍ ಲುಕ್ಮಾನ್ ಅಡ್ಯಾರ್ ಸತ್ತ ಹೆಣವನುಕಜ್ಜಿನಾಯಿಕಚ್ಚಿ ಎಳೆವಾಗಕುಟುಂಬದ ಕೈಗಿಟ್ಟಕಾಂಚಾನದ ಕಟ್ಟುಶವವನು ಪುನಃಸಾಯುವಂತೆ ಮಾಡಿತು ಧರ್ಮಕ್ಕಾಗಿ‌‌‌‌..ಜಾತಿಗಾಗಿ‌…ದೇಶಕ್ಕಾಗಿ‌‌‌..ಎಂದೆಲ್ಲಾ ಬೊಬ್ಬಿರುವಾಗಹೆಣ ಮಾತ್ರ ಮೌನಕೋಮಿನ ಮತ್ತಿನ ಮುಂದೆನಾನೂ ಗೌಣ ಸತ್ತಾಗ ಸುಡುವುದುಜಡವನ್ನು ,ಜಗವನ್ನಲ್ಲಸುಡುಗಾಡಿನ ಕಟ್ಟಿಗೆಪಕ್ಷದ ಕುರ್ಚಿಯನ್ನುಗಟ್ಟಿ ಮಾಡಲಿರುವುದಲ್ಲ ಮತ್ತೊಮ್ಮೆ ಹುಟ್ಟಿ ಬಾಮತ್ತೊಮ್ನೆ ಕೊಲೆಯಾಗುಇನ್ನೊಮ್ಮೆ ನಿನ್ನ ಹೆಣಕ್ಕೆಪರಿಹಾರ ನೀಡುತ್ತೇವೆಮತ್ತೆ ಪ್ರತೀಕಾರತೀರಿಸುತ್ತೇವೆ ಬದುಕಿನ ಹಸಿರಿಗೆಕೋಮಿನ ಚೂರಿಬದುಕು ಮೂರಾಬಟ್ಟೆಸತ್ತ ಮೇಲೂರಾಜಕುನ್ನಿಗಳ ಮುಂದೆಹೆಣ ಬಿಕಾರಿಮುಂದಿನ ಓಟಿಗೆ ತಯ್ಯಾರಿ!! Continue reading ಹೆಣ ಮುಚ್ಚುವ ಕಾಂಚನ

ಇದು ಯಾರಪ್ಪನಾ ದೇಶವೂ ಅಲ್ಲ!

✍ ರಾ ಚಿಂತನ್ ಬಾಬ್ರಿ ಕೇವಲ ಮಸೀದಿಯಲ್ಲ.ಹಿಜಾಬ್ ಕೇವಲ ಬಟ್ಟೆಯಲ್ಲ.ಇದು ಅಸ್ತಿತ್ವ!ಅಸ್ತಿತ್ವಕ್ಕೆ ಕೈ ಇಟ್ಟಾಗಲೇ ಅಲ್ಲವೇ ಸಂಘರ್ಷ?ಕೈ ಇಟ್ಟವರಾರು, ಇಡುತ್ತಿರುವವರಾರು? ಹೋಗು ಪಾಕಿಸ್ತಾನಕ್ಕೆನ್ನುವೆಪಕ್ಕದೂರಿಗೆ ಹೋಗಲು ಕಾಸಿಲ್ಲ!ನಿನ್ನಲ್ಲೂ… ನನ್ನಲ್ಲೂ…ದಿವಾಳಿ ಭಾರತದಲ್ಲಿನಾನು ಬಡವ, ನೀನೂ ಬಡವ.ಆದರೂ ಎಲ್ಲಾ ಮಾರುವೆ ಎನ್ನುತಾಜೈಕಾರ ಹಾಕುವೆ, ಮಾರಲುಉಳಿದಿರುವ ಪುಟಗೋಸಿ ಬೇಡವೇಯಕಃಶ್ಚಿತ್ ಮಾನ ಮುಚ್ಚಲು! ನನಗಿಷ್ಟ ಭಾರತ, ನನ್ನ ಮನೆಯಿದುಇಲ್ಲಿ ಗಣೇಶ, ಶಾರದೆ, ರಸಋಷಿ, ರಬ್ಬ್,ಜೀಸಸ್, ಬುದ್ಧ, ಮಹಾವೀರ, ಕವಿವರ್ಯ,ವೀರಕಲಿಗಳೆಲ್ಲಾ ನನ್ನವರು!ಎಲ್ಲರೆಂದರೆ ಎಲ್ಲರೂ… ಆದರೂ ಪಾಕಿಸ್ತಾನಕ್ಕೆ ಹೋಗೆನ್ನುತಾಮಂದಿರ-ಮಸೀದಿ, ಹಿಂದೂ -ಮುಸ್ಲಿಂಸಂಘರ್ಷದಲ್ಲಿ ಸಿಲುಕಿ ನೀನೇ ನರಳುತ್ತಿರುವೆ.ಹೊಟ್ಟೆ ಹಸಿವಲ್ಲೂ ಧರ್ಮದಮಲೇರಿಸಿಕೊಂಡನಿನಗೊಂದು ಕಠಿಣ ಸತ್ಯ ಹೇಳಲೇ- ಇದುಯಾರಪ್ಪನಾ ದೇಶವೂ ಅಲ್ಲ! Continue reading ಇದು ಯಾರಪ್ಪನಾ ದೇಶವೂ ಅಲ್ಲ!