ಅಸ್ತಿತ್ವವನ್ನು ಕೆಡವಿದ ಬುಲ್ಡೋಝರ್

ಭಾಗ :6 ರಿಯಾಝ್ ಅಂಕತಡ್ಕಪತ್ರಿಕೋದ್ಯಮ ವಿದ್ಯಾರ್ಥಿ, ಮಂಗಳೂರು ವಿಶ್ವವಿದ್ಯಾನಿಲಯ “ಭಾರತದಲ್ಲಿ ಜೀವಿಸಬೇಕಾದರೆ ಜೈ ಶ್ರೀರಾಮ್ ಹೇಳಬೇಕು” ಎನ್ನುವ ಘೋಷಣೆಗಳನ್ನು ಕೂಗುತ್ತಾ, ಕೈಯಲ್ಲಿ ಕತ್ತಿ, ಖಡ್ಗ, ಪಿಸ್ತೂಲ್ ಗಳನ್ನು ಹಿಡಿದುಕೊಂಡು ಮೆರವಣಿಗೆ ನಡೆಸುವ, ಮಸೀದಿಗಳ ಮುಂದೆ ಇಸ್ಲಾಮಿನ, ಮುಸಲ್ಮಾನರ ವಿರುದ್ಧ ಕೇಕೆಗಳನ್ನು ಹಾಕುವ ಭಯೋತ್ಪಾದಕರ ಗುಂಪನ್ನು ನೀವು ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಕಂಡಿರಬಹುದು. ಇದು ಎಲ್ಲಾ ಪ್ರಜೆಗಳಿಗೂ ತಮ್ಮ ತಮ್ಮ ಧರ್ಮವನ್ನು ಆಚರಿಸುವ, ಅನುಸರಿಸುವ ಮತ್ತು ಪ್ರಚಾರಪಡಿಸುವ ಸಮಾನ ಅವಕಾಶ ನೀಡಿದಂತಹಾ ಧರ್ಮನಿರಪೇಕ್ಷ ದೇಶವಾದ ಭಾರತದಲ್ಲಿ ಎಂಬುದು ಆಘಾತಕಾರಿ ಮತ್ತು ಬೇಸರದ ಸಂಗತಿಯಾಗಿದೆ. ಗಲಭೆಕೋರರನ್ನು ತಡೆದು ಕಟ್ಟಿಹಾಕಬೇಕಾದ ಸರ್ಕಾರ ಮಾತ್ರ ತಮ್ಮ ಉಳಿವಿಗಾಗಿ, … Continue reading ಅಸ್ತಿತ್ವವನ್ನು ಕೆಡವಿದ ಬುಲ್ಡೋಝರ್

ಧರೆಗುರುಳಿವೆ ಮಾನವೀಯತೆ

✍🏻 ಎಮೆಸ್ಸೆ ಸವಣೂರು ನಿನಗಿದು ಕ್ಷಣಮಾತ್ರದ ಹೊಡೆತನನ್ನ ಜೀವಮಾನದ ಬೆವರಿನ ದುಡಿತ.ಮನುಷ್ಯತ್ವವೇ ಕಳೆದ ಹೋದ ನಿನ್ನಲ್ಲಿಮನದ ನೋವ ತೋಡಿಕೊಂಡರೇನಿಲ್ಲಿ. ಒಂದೈದು ನಿಮಿಷ ತಡೆಯಬಾರದಿತ್ತೆ?ಹನಿ ನೀರಿನ ಸೀಸೆಯ ಬದಿಯಲ್ಲಿಡುತ್ತಿದ್ದೆ.ನೀ ದಣಿದಾಗ ಕುಡಿಯಲು ಹಿಂಜರಿಯದಿರು,ನೀನೊಮ್ಮೆಯೂ ಬಾಯಾರಿಕೆಯಿಂದ ಕಂಗಾಲಾಗದಿರು. ನಿನಗಿಂತಲೂ ಮುಂಚೆ ಮೆರದವರುಸರ್ವಾಧಿಕಾರವ ತೋರಿ ಜರೆದವರುಒಂದೇ ಕ್ಷಣದಲ್ಲಿ ಗತಿಸಿ ಹೋದ ಮೇಲೆನಿನ್ನನ್ನು ಬಿಡಬಹುದೇ ಭಗವಂತನ ಲೀಲೆ ಬ್ರೂಣವ ಚುಚ್ಚಿ ಕೇಕೆ ಹಾಕಿದವರುಗರ್ಭವ ಸೀಳಿ ಪೆಟ್ರೋಲ್ ಸುರಿದವರುಬಡವನ ಹೊಟ್ಟೆಗೆ ಕಲ್ಲೆಸದವರುತುಂಡು ಇಟ್ಟಿಗೆಯ ಧರೆಗೆ ಉರುಳಿಸಿದವರು ಕಾಲಚಕ್ರ ತಿರುಗಿದಾಗ ಎಲ್ಲವ ನೆನಪಿಸುವೆವುನಿನ್ನ ಸೋಲಿಸಿ ಮಂಡಿಯೂರಿ ನಿಲ್ಲಿಸುವೆವುಫರೋವನ ಪೌರುಷ ಮುಳುಗಿಸಿದ ಹಾಗೆನಂದಿದೆ ನಂರೂದನ ಅಗ್ನಯ ಬೇಗೆ ಅಧಿಕಾರದ ಕೋಟೆಗಳೇ ಧರೆಗುರುಳಿವೆಅಹಂಕಾರದ … Continue reading ಧರೆಗುರುಳಿವೆ ಮಾನವೀಯತೆ

ಪೂರ್ವಜರು ಮಾಡಿದ ಅಪರಾಧಕ್ಕಾಗಿ ಇವರನ್ನೀಗ ನಾವು ದ್ವೇಷಿಸಬೇಕೇ?

✍ ರವಿಕಿರಣ್ ರೈ, ಕದ್ರಿ, ಮಂಗಳೂರು ಆಗಿನ ಮುಸ್ಲಿಮರ ಪೂರ್ವಜರು ನವಾಬ ಸುಲ್ತಾನರ ಸೇನೆಯಲ್ಲಿದ್ದುಕೊಂಡು ಹಿಂದೂ ದೇವಸ್ಥಾನಗಳನ್ನು ಲೂಟಿ ಹೊಡೆದಿದ್ದಾರೆ, ಅದಕ್ಕಾಗಿ ಈಗಿನ ಮುಸ್ಲಿಮರನ್ನೂ ಹಿಂದೂ ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡಲು ಬಿಡುತ್ತಿಲ್ಲ ಎಂಬ ವಿವರಣೆ ಹಿಂದುತ್ವ ಸಂಘಟನೆಗಳದ್ದು. 1665ರಲ್ಲಿ ನಮ್ಮ ಕುಂದಾಪುರ ತಾಲೂಕಿನ ಬಸರೂರು ಒಂದು ದೊಡ್ಡ ಬಂದರಾಗಿದ್ದು ಅಲ್ಲಿ ಅರಬಿಗಳು, ಪೋರ್ಚುಗೀಸರು ಮತ್ತು ಸ್ಥಳೀಯ ಜೈನರು, ನಾಡವರು ವಿದೇಶದೊಂದಿಗೆ ಭಾರೀ ವ್ಯಾಪಾರ ಮಾಡುತ್ತಿದ್ದರು. ಬಸರೂರು ಬಂದರ್‌ನಿಂದ ದೊಡ್ಡ ಪ್ರಮಾಣದಲ್ಲಿ ಕರಿಮೆಣಸು, ಮಸಾಲೆ ಪದಾರ್ಥ ಮತ್ತು ಅಕ್ಕಿ ಅರಬಿ ದೇಶಕ್ಕೆ ನಿರ್ಯಾತವಾಗುತ್ತಿತ್ತು. ಆ ಸಮಯದಲ್ಲಿ ಬಸರೂರು ಅತ್ಯಂತ ಸಮೃದ್ಧ ಪ್ರದೇಶವಾಗಿತ್ತು. … Continue reading ಪೂರ್ವಜರು ಮಾಡಿದ ಅಪರಾಧಕ್ಕಾಗಿ ಇವರನ್ನೀಗ ನಾವು ದ್ವೇಷಿಸಬೇಕೇ?

ಹಲಾಲ್_ಹಾಗೆಂದರೇನು…?

✍ ಇಸ್ಮತ್_ಪಜೀರ್ ಪ್ರಸ್ತುತ ಭಾರತದಲ್ಲಿ ಮುಸ್ಲಿಮರ ವಿರುದ್ಧದ ಅಸಹನೆಯ ಭಾಗವಾಗಿ ಮುಸ್ಲಿಮರು ಮಾಂಸದ ಪ್ರಾಣಿಯನ್ನು ಕೊಯ್ಯುವಾಗ ಅನುಸರಿಸುವ ವಿಧಿ ವಿಧಾನವನ್ನೂ ಕಟುವಾಗಿ ವಿರೋಧಿಸುವ ಒಂದು ನೀಚ ಟ್ರೆಂಡ್ ಚಲಾವಣೆಯಲ್ಲಿದೆ. ಭಾರತದಲ್ಲಿ ಕೇರಳವೆಂದರೆ ಅತ್ಯಂತ ವಿದ್ಯಾವಂತ ಮತ್ತು ಪ್ರಜ್ಞಾವಂತರುಳ್ಳ ನಾಡೆಂದು ಪರಿಗಣಿಸಲಾಗುತ್ತದೆ. ಆದುದರಿಂದಲೇ ಅಲ್ಲಿ ಕೋಮುವಾದಿ ರಾಜಕೀಯದ ಬೆಳೆ ತೆಗೆಯಲು ಬಲಪಂಥೀಯ ಪ್ರತಿಗಾಮಿ ಶಕ್ತಿಗಳಿಗೆ ಸಾಧ್ಯವಾಗುತ್ತಿಲ್ಲ. ಕೇರಳದಲ್ಲಿ ಇಂದಿಗೂ ಬ್ರಾಹ್ಮಣೇತರ ಹಿಂದೂಗಳಲ್ಲಿ ಬಹುತೇಕರು ದನದ ಮಾಂಸವನ್ನು ಸೇವಿಸುತ್ತಾರೆ. ಅಲ್ಲಿ ಅದನ್ನು ಕೇವಲ ಒಂದು ಕಡಿಮೆ ಬೆಲೆಗೆ ಲಭ್ಯವಿರುವ ಪೌಷ್ಟಿಕಾಂಶವಿರುವ ಆಹಾರ ಎಂದಷ್ಟೇ ನೋಡಲಾಗುತ್ತದೆ. ಅಲ್ಲಿ ಈ ವರೆಗೂ ಗೋ ಪಾಲಿಟಿಕ್ಸ್‌ಗೆ ದೊಡ್ಡ ಮಣ್ಣನೆ … Continue reading ಹಲಾಲ್_ಹಾಗೆಂದರೇನು…?

“ದಿನವೊಂದು ಕಾಯುತಿದೆ”

✍ ಫಯಾಝ್ ದೊಡ್ಡಮನೆ ದಿನವೊಂದು ಕಾಯುತಿದೆಹೊಸ ಹುರುಪನು ಹೊತ್ತುಸವಿ ಕನಸಿನ ತುತ್ತು-ನೀಡಲು ದಾರಿ ಕಾಯುತಿದೆ ಹುಚ್ಚು ಮನಸುಗಳು ಮುಕ್ತ-ವಾಗಿ, ಸ್ವಚ್ಚ ಪ್ರೀತಿಯ ತೊಟ್ಟಿಲಾಗಿಜೋಗುಳ ಪದಗಳ ಮಾರ್ದನಿ-ಯಾಗಿ  ಬೀಸಿ ಕರೆಯಲಿವೆ ಸರ್ವಾಧಿಕಾರದ ಸೊಕ್ಕನು ಮುರಿದುಅಮಾನವೀಯ ಸಿದ್ಧಾಂತವ ಒಗೆದುರಕ್ಕಸರ ರೆಕ್ಕೆಯನು ಕಡಿದುಕೆಂಪು ನದಿಗಳು ಹರಿಯಲಿವೆ ನಾವು ನೀವು ಒಂದುಇನ್ನಿಲ್ಲ ಭೇದದ ಬಿಂದುನಮ್ಮೆಲ್ಲ ಕನಸುಗಳು ಒಂದು-ಗೂಡಲಿವೆ ಭೋರ್ಗರೆಯಲಿವೆ. ನಮ್ಮ ದೇಶ ನಮ್ಮ ಜನಮಣ್ಣು ಮಾತ್ರ ಅಲ್ಲವೇ ಅಲ್ಲಮಣ್ಣು- ಮಾತೆ ಗಾವರವಿಲ್ಲಒಂದು ಗೂಡಲಿವೆ ಮನಸುಗಳು ಒಂದು ಗೂಡಲಿವೆ ದಿನವೊಂದು ಕರೆಯುತಿದೆಬನ್ನಿರೆಂದು ಬರಲು ಶುರುವಿದಿಂದುಆಗಲಿ ಹೆಜ್ಜೆ ಹೆಜ್ಜೆಗಳಾಗಲಿಹೆಜ್ಜೆ ಸಪ್ಪಳ ಜೋರಿರಲಿ ದಿನವೊಂದು ಕಾಯುತಿದೆಹೊಸ ಹುರುಪನು ಹೊತ್ತು . Continue reading “ದಿನವೊಂದು ಕಾಯುತಿದೆ”