“ದಿನವೊಂದು ಕಾಯುತಿದೆ”

✍ ಫಯಾಝ್ ದೊಡ್ಡಮನೆ ದಿನವೊಂದು ಕಾಯುತಿದೆಹೊಸ ಹುರುಪನು ಹೊತ್ತುಸವಿ ಕನಸಿನ ತುತ್ತು-ನೀಡಲು ದಾರಿ ಕಾಯುತಿದೆ ಹುಚ್ಚು ಮನಸುಗಳು ಮುಕ್ತ-ವಾಗಿ, ಸ್ವಚ್ಚ ಪ್ರೀತಿಯ ತೊಟ್ಟಿಲಾಗಿಜೋಗುಳ ಪದಗಳ ಮಾರ್ದನಿ-ಯಾಗಿ  ಬೀಸಿ ಕರೆಯಲಿವೆ ಸರ್ವಾಧಿಕಾರದ ಸೊಕ್ಕನು ಮುರಿದುಅಮಾನವೀಯ ಸಿದ್ಧಾಂತವ ಒಗೆದುರಕ್ಕಸರ ರೆಕ್ಕೆಯನು ಕಡಿದುಕೆಂಪು ನದಿಗಳು ಹರಿಯಲಿವೆ ನಾವು ನೀವು ಒಂದುಇನ್ನಿಲ್ಲ ಭೇದದ ಬಿಂದುನಮ್ಮೆಲ್ಲ ಕನಸುಗಳು ಒಂದು-ಗೂಡಲಿವೆ ಭೋರ್ಗರೆಯಲಿವೆ. ನಮ್ಮ ದೇಶ ನಮ್ಮ ಜನಮಣ್ಣು ಮಾತ್ರ ಅಲ್ಲವೇ ಅಲ್ಲಮಣ್ಣು- ಮಾತೆ ಗಾವರವಿಲ್ಲಒಂದು ಗೂಡಲಿವೆ ಮನಸುಗಳು ಒಂದು ಗೂಡಲಿವೆ ದಿನವೊಂದು ಕರೆಯುತಿದೆಬನ್ನಿರೆಂದು ಬರಲು ಶುರುವಿದಿಂದುಆಗಲಿ ಹೆಜ್ಜೆ ಹೆಜ್ಜೆಗಳಾಗಲಿಹೆಜ್ಜೆ ಸಪ್ಪಳ ಜೋರಿರಲಿ ದಿನವೊಂದು ಕಾಯುತಿದೆಹೊಸ ಹುರುಪನು ಹೊತ್ತು . Continue reading “ದಿನವೊಂದು ಕಾಯುತಿದೆ”

ಹೆಣ ಮುಚ್ಚುವ ಕಾಂಚನ

✍ ಲುಕ್ಮಾನ್ ಅಡ್ಯಾರ್ ಸತ್ತ ಹೆಣವನುಕಜ್ಜಿನಾಯಿಕಚ್ಚಿ ಎಳೆವಾಗಕುಟುಂಬದ ಕೈಗಿಟ್ಟಕಾಂಚಾನದ ಕಟ್ಟುಶವವನು ಪುನಃಸಾಯುವಂತೆ ಮಾಡಿತು ಧರ್ಮಕ್ಕಾಗಿ‌‌‌‌..ಜಾತಿಗಾಗಿ‌…ದೇಶಕ್ಕಾಗಿ‌‌‌..ಎಂದೆಲ್ಲಾ ಬೊಬ್ಬಿರುವಾಗಹೆಣ ಮಾತ್ರ ಮೌನಕೋಮಿನ ಮತ್ತಿನ ಮುಂದೆನಾನೂ ಗೌಣ ಸತ್ತಾಗ ಸುಡುವುದುಜಡವನ್ನು ,ಜಗವನ್ನಲ್ಲಸುಡುಗಾಡಿನ ಕಟ್ಟಿಗೆಪಕ್ಷದ ಕುರ್ಚಿಯನ್ನುಗಟ್ಟಿ ಮಾಡಲಿರುವುದಲ್ಲ ಮತ್ತೊಮ್ಮೆ ಹುಟ್ಟಿ ಬಾಮತ್ತೊಮ್ನೆ ಕೊಲೆಯಾಗುಇನ್ನೊಮ್ಮೆ ನಿನ್ನ ಹೆಣಕ್ಕೆಪರಿಹಾರ ನೀಡುತ್ತೇವೆಮತ್ತೆ ಪ್ರತೀಕಾರತೀರಿಸುತ್ತೇವೆ ಬದುಕಿನ ಹಸಿರಿಗೆಕೋಮಿನ ಚೂರಿಬದುಕು ಮೂರಾಬಟ್ಟೆಸತ್ತ ಮೇಲೂರಾಜಕುನ್ನಿಗಳ ಮುಂದೆಹೆಣ ಬಿಕಾರಿಮುಂದಿನ ಓಟಿಗೆ ತಯ್ಯಾರಿ!! Continue reading ಹೆಣ ಮುಚ್ಚುವ ಕಾಂಚನ