ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದ ವಿಶ್ವ ಗುರು ಭಾರತದ ಬಗ್ಗೆ ನಿಮಗೆ ಗೊತ್ತಾ ?

– ಶಾನಾಝ್ ಬಂಟ್ವಾಳ ಕೊರೋನದಂತೆ ಎಚ್1ಎನ್1 ಕೂಡ ಚೀನಾ ದೇಶದಲ್ಲಿ ಜನ್ಮ ತಾಳಿದ ವೈರಸ್. ಮನುಷ್ಯ ಉಸಿರಾಡುವಾಗ ಗಾಳಿಯಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹಾಗಾಗಿ ಇದು ಹರಡುವ ವಿಧಾನ ಮತ್ತು ಕಾಯಿಲೆಯ ತೀವ್ರತೆ ಎರಡರಲ್ಲೂ ಕೊರೋನ ವೈರಸ್ ಗಿಂತ ಹಲವು ಪಟ್ಟು ಅಪಾಯಕಾರಿ. 2009ರಲ್ಲಿ ಈ ವೈರಸ್ ಚೀನಾದಲ್ಲಿ ಕಂಡು ಬಂತು. ಅಷ್ಟೇ ವೇಗವಾಗಿ ಜಗತ್ತಿನಾದ್ಯಂತ ಹರಡಿತ್ತು. ಪರಿಣಾಮ ಚೀನಾ, ಅಮೆರಿಕಾ, ಬ್ರಿಟನ್, ಕೆನಡ ಮೊದಲಾದ ಜಗತ್ತಿನ ಬಲಾಢ್ಯ ರಾಷ್ಟ್ರಗಳು ನಡುಗಿ ಹೋದವು. ಎಚ್1ಎನ್1 ವೈರಸ್ ನಿಯಂತ್ರಣಕ್ಕೆ ಈಗ ನಾವು ನಮ್ಮ ದೇಶದಲ್ಲಿ ನೋಡುತ್ತಿದ್ದೇವೆ ಅಲ್ವಾ ಅದಕ್ಕೂ ಕಠಿಣ ಲಾಕ್ ಡೌನ್ … Continue reading ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದ ವಿಶ್ವ ಗುರು ಭಾರತದ ಬಗ್ಗೆ ನಿಮಗೆ ಗೊತ್ತಾ ?

ಲಾಕ್ ಡೌನ್ ಎಂಬ ಕರಾಳ ಶಬ್ದ

– ಅರ್ಫೀದ್ ಅಡ್ಕಾರ್ ಕೇಳಿದೊಡನೆ ಗಡಗಡ ನಲುಗಿಹೋದೆ ನಾನು ;ದಿನಗೂಲಿ ಮಾಡಿ ಉಣ್ಣುವರ ಗತಿಯೇನು;ಮತ್ತೆ ನೆನಪಾಯಿತು ಆ ಕರಾಳ ದಿನಗಳು;ಕಣ್ಣುತೇವಗೊಂಡು ಹರಿಯಿತು ಕಣ್ಣೀರ ಹನಿಗಳು ಉಣ್ಣಲು ಅನ್ನವಿಲ್ಲ, ಕೈಯಲ್ಲಿ ಹಣವಿಲ್ಲಾ!ಉರಿದು ಬೂದಿಯಂತಾಗಿರುವ ಮನಸ್ಸೆಲ್ಲಾ!ಮುಗಿಲು ಮುಟ್ಟಿದೆ ನನ್ನವರ ರೋಧನವು;ಮತ್ತೆ ಬದುಕು ಕಟ್ಟುವ ಪರಿಶ್ರಮವು ಹೊರಗೆ ಹೋದರೆ ಎಲ್ಲವೂ ಬೀಗಾಹೊಟ್ಟೆಗೆ ಹಾಕಲು ಸಾದ್ಯವೇ ಬೀಗಾಹಸಿವು ಹಸಿವೆಂದು ಮಕ್ಕಳ ಕೂಗೂಬಡವರ ನೋವು ಕೇಳುವವರು ಯಾರೂ ? ಬಗೆಬಗೆಯ ಅಡುಗೆ ಮಾಡಿದರು ಅವರುಇನ್ನು ಯಾವಾಗ ಅನ್ನವೆಂದು ನಮ್ಮವರುಉಳ್ಳವನಿಗೆ ಅದು ಸಂತಸದ ದಿನಗಳುಇಲ್ಲದವನಿಗೆ ಅದು ಕರಾಳ ದಿನಗಳು ಅನ್ನವ ಕೇಳಿದರೆ ಇಲ್ಲಾ ಎನ್ನುವರುಸಾಕು ನಾಯಿಗೂ ಬಿರಿಯಾನಿ ಹಾಕುವರುಹೊರಗೆ ಹೋದರೆ … Continue reading ಲಾಕ್ ಡೌನ್ ಎಂಬ ಕರಾಳ ಶಬ್ದ

ಸರ್ಕಾರದ ದೂರದೃಷ್ಟಿಯ ಕೊರತೆ ಭಾರತೀಯರನ್ನು ಇನ್ನಷ್ಟು ಸಂಕಷ್ಟಗಳಿಗೆ ಗುರಿಯಾಗಿಸಲಿದೆ

– ಜೈನುಲ್ ಅಕ್ಬರ್ ಕಡೇಶಿವಾಲಯ “ಭಾರತವು ಕೋರೋನಾದ ಅಂತಿಮ ಆಟದಲ್ಲಿದೆ.ಮೋದಿಯ ನಾಯಕತ್ವವು ಅಂತರರಾಷ್ಟ್ರೀಯ ಸಹಕಾರಕ್ಕೆ ಒಂದು ಉತ್ತಮ ಉದಾಹರಣೆ” ಅಂಥ ಮಾರ್ಚ್ ಆರಂಭದಲ್ಲಿಯೇ ಆರೋಗ್ಯ ಸಚಿವ ಹರ್ಷವರ್ಧನ್ ಬಣ್ಣಿಸಿದ್ದರು.ಜನವರಿಯಿಂದಲೇ ಬೇರೆ ಬೇರೆ ರಾಷ್ಟ್ರಗಳಿಗೆ ಭಾರತ ಕೋರೋನಾ ಲಸಿಕೆಯನ್ನು ಕಳುಹಿಸಿದ್ಧನ್ನು ಸಚಿವರು ಆಧಾರವಾಗಿರಿಸಿ ಮೋದಿಯ ಗುಣಗಾನ ಮಾಡಿದ್ಧರು. 2020 ಸೆಪ್ಟಂಬರ್ ತಿಂಗಳಲ್ಲಿ ಪ್ರತಿ ದಿವಸಕ್ಕೆ ಸರಾಸರಿ 93,000 ಕೋರೋನಾ ಪಾಸಿಟಿವ್ ವರದಿಗಳು ಪತ್ತೆಯಾಗುತ್ತಿದ್ಧು 2021 ರ ಫೆಬ್ರವರಿ ವೇಳೆಗೆ ಇದು ಸರಾಸರಿ 11,000 ಕ್ಕೆ ಬಂದು ನಿಂತಿತ್ತು. ಇದನ್ನು ಮೋದಿ ಸಾಧನೆ ಅಂತ ಭಾವಿಸಿದ್ಧ ದೃಶ್ಯ ಮಾಧ್ಯಮಗಳು ಮೋದಿ ಬಗ್ಗೆ ಅತಿರಂಜಿತ ವರದಿಗಳನ್ನು … Continue reading ಸರ್ಕಾರದ ದೂರದೃಷ್ಟಿಯ ಕೊರತೆ ಭಾರತೀಯರನ್ನು ಇನ್ನಷ್ಟು ಸಂಕಷ್ಟಗಳಿಗೆ ಗುರಿಯಾಗಿಸಲಿದೆ

ಮಹಮ್ಮದ್ ಅಬ್ದುಲ್ ರಹ್ಮಾನ್ ಸಾಹೇಬ್

– ಹಲೀಮಾ ಸಹ್ಲಾ ಭಾರತವು ಸುದೀರ್ಘವಾದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಹೊಂದಿದೆ. 15ನೇ ಶತಮಾನದಲ್ಲಿ ಭಾರತಕ್ಕೆಆಗಮಿಸಿದ ಪೋರ್ಚುಗೀಸ್ ವಸಾಹತುಶಾಹಿತ್ವ ವಿರೋಧಿ ಹೋರಾಟದಿಂದ ಪ್ರಾರಂಭಗೊಂಡು, ಬ್ರಿಟಿಷರಿಂದ ಇಂಡಿಯಾವು ಸ್ವಾತಂತ್ರ್ಯ ಪಡೆದ ಇತಿಹಾಸದುದ್ದಕ್ಕೂ ಹೊಸ ಸ್ವಾತಂತ್ರ್ಯ ವೀರರ ಹೆಸರುಗಳು ಕೇಳಿಬರುತ್ತವೆ.ಅವರೆಲ್ಲರೂ ತಮ್ಮದೇ ಆದ ಶೈಲಿಗಳಲ್ಲಿ ಹೋರಾಟರಂಗದ ಮುಂಚೂಣಿಯಲ್ಲಿರುತ್ತಾರೆ. ಆದರೆ ಅವರಲ್ಲಿ ಹೆಚ್ಚಿನ ವೀರರ ಹೆಸರುಗಳು ಇತಿಹಾಸದ ಪುಟಗಳಿಗಷ್ಟೇ ಸೀಮಿತಗೊಂಡಿದೆ. ಇಂತಹ ವೀರರ ಪಟ್ಟಿಯಲ್ಲಿ ಕೇರಳದ ಮುಹಮ್ಮದ್ ಅಬ್ದುರ್ರಹ್ಮಾನ್ ರ ಹೆಸರೂ ಸೇರಿದೆ. ಕ್ರಿ.ಶ 1898ರಲ್ಲಿ ಮುಹಮ್ಮದ್ ಅಬ್ದುರ್ರಹ್ಮಾನ್ ರು ಕೇರಳದ ಕೂಡುಂಗಲ್ಲೂರಿನಲ್ಲಿ ಜನಿಸುತ್ತಾರೆ.ಕ್ಯಾಲಿಕಟ್ ನಲ್ಲಿ ತನ್ನ ಪ್ರೌಢ ಶಿಕ್ಷಣ ಹಾಗೂ ಮಡ್ರಾಸಿನಲ್ಲಿ(ಚೆನ್ನೈ)ಯಲ್ಲಿ ಪದವಿ ಶಿಕ್ಷಣ … Continue reading ಮಹಮ್ಮದ್ ಅಬ್ದುಲ್ ರಹ್ಮಾನ್ ಸಾಹೇಬ್

ಕೊರೋನಾ 2 ನೇ ಅಲೆಯ ಆರ್ಭಟಕ್ಕೆ ತುತ್ತಾದ ಜನಸಾಮಾನ್ಯ : ಸರಕಾರದ ನಿರ್ಲಕ್ಷ್ಯತನವೂ ಒಂದು ಕಾರಣ

ಇಂದು ಕೊರೊನಾ ವೈರಾಣುವಿನ ಎರಡನೇ ಅಲೆಯಲ್ಲಿ ಭಾರತ ತೇಲಾಡುತ್ತಿದೆ. ಕಳೆದ ಒಂದು ವರ್ಷದ ಅವಧಿಯ ಸಮಯದಲ್ಲಿ ಕೋವಿಡ್ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರ ತಗೆದುಕೊಂಡಂತಹ ನಿರ್ಧಾರಗಳು ಬಹುತೇಕವಾಗಿ ಅವೈಜ್ಞಾನಿಕವಾಗಿದ್ದವು. ಮತ್ತು ಪೂರ್ವನಿಯೋಜಿತವಲ್ಲದ ಮುತುವರ್ಜಿಗಳಾಗಿದ್ದವು. ಇದರ ಪರಿಣಾಮ ಸಫಲತೆಗಿಂತ ಹೆಚ್ಚು ವಿಫಲತೆಯನ್ನು ಸರಕಾರ ಎದುರಿಸಬೇಕಾಯಿತು. ಸದ್ಯದ ದೇಶದ ಆರೋಗ್ಯ ವ್ಯವಸ್ಥೆಯು ಸಂಪೂರ್ಣವಾಗಿ ಅಸಹಾಯಕತೆಯ ಲಕ್ಷಣಗಳು ತೋರುತ್ತಿದೆ. ಪ್ರಸ್ತುತ, ದೇಶದ ಪರಿಸ್ಥಿತಿಯನ್ನು ಗಮನಿಸುವಾಗ ಬಹಳ ಸಂಕಟವಾಗುತ್ತಿದೆ. ಎಲ್ಲಿ ನೋಡಿದರೂ ಸಾವು ನೋವಿನ ಸಂಗತಿ. ಬಹಳ ದುಃಖಿತ ಸನ್ನಿವೇಶದಲ್ಲಿ ನಾವಿದ್ದೇವೆಂಬುದು ಸುಳ್ಳಲ್ಲ. ಸಂಪೂರ್ಣವಾಗಿ ಕೊರೊನಾ ವೈರಾಣುವಿನ ಕಬಂದ ಬಾಹುಗಳಲ್ಲಿ ದೇಶ ಸಿಲುಕಿಕೊಂಡಿದೆಯೇ ಎಂಬ ಅನುಮಾನ ಕಾಡತೊಡಗಿದೆ. … Continue reading ಕೊರೋನಾ 2 ನೇ ಅಲೆಯ ಆರ್ಭಟಕ್ಕೆ ತುತ್ತಾದ ಜನಸಾಮಾನ್ಯ : ಸರಕಾರದ ನಿರ್ಲಕ್ಷ್ಯತನವೂ ಒಂದು ಕಾರಣ

ಮೌಲ್ಯ ಕಳೆದುಕೊಳ್ಳುತ್ತಿರುವ ಪ್ರಸಕ್ತ ರಾಜಕೀಯ ವ್ಯವಸ್ಥೆ

– ಅತಾವುಲ್ಲಾ ಪುಂಜಾಲಕಟ್ಟೆ ಇಡೀ ಪ್ರಪಂಚವನ್ನೇ ಕೊರೋನಾ ಎಂಬ ಸಾಂಕ್ರಾಮಿಕ ರೋಗ ಕಾಡುತಿದ್ದರೆ, ಭಾರತ ದೇಶದ ರಾಜಕೀಯ ಚಿತ್ರಣವು ತನ್ನದೇ ಆದ ರೀತಿಯಲ್ಲಿ ದ್ವೇಷ ರಾಜಕೀಯದ ಕೂಪದಲ್ಲಿ ರೋಗಗ್ರಸ್ತವಾದಂತಿದೆ. ಕೇಂದ್ರದಲ್ಲಿ ಆರ್.ಎಸ್.ಎಸ್ ಪ್ರೇರಿತ ಬಿಜೆಪಿ ಸರಕಾರ 2014ರಲ್ಲಿ ಅಧಿಕಾರ ವಹಿಸಿಕೊಂಡಂದಿನಿಂದ ಇಂದಿನ ವರೆಗೆ ಒಂದಲ್ಲ ಒಂದು ವಿಧದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲಾಗಿ ದೇಶದ ಪ್ರಜೆಗಳನ್ನು ಗುರಿಯಾಗಿಸುತ್ತಿರುವುದು ಕಾಣಬಹುದಾಗಿದೆ. ಅದು ಒಂದಾ ಪ್ರಬಲ ಕೋಮುಭಾವದಿಂದಾಗಿರಬಹುದು, ಇಲ್ಲವೇ ಬಂಡವಾಳಶಾಹಿಗಳ ಹಿತ ಕಾಪಾಡುವ ಸಲುವಾಗಿರಬಹುದು. ಇನ್ನೂ ಸರಕಾರದ ಜನವಿರೋಧಿ ನೀತಿಗಳ ಮತ್ತು ಆಡಳಿತದ ವಿರುದ್ಧ ಮಾತನಾಡಲು ಪ್ರತಿಪಕ್ಷಗಳೇ ಇಲ್ಲದಂತಿದೆ. ಯಾರೆಲ್ಲಾ ಸರಕಾರದ ಜನವಿರೋಧಿ … Continue reading ಮೌಲ್ಯ ಕಳೆದುಕೊಳ್ಳುತ್ತಿರುವ ಪ್ರಸಕ್ತ ರಾಜಕೀಯ ವ್ಯವಸ್ಥೆ

ಸಾರಿಗೆ ನೌಕರರ ಬೇಡಿಕೆ ಈಡೇರಿಸದೆ, ಸರ್ಕಾರವು ಮಾಡುತ್ತಿರುವ ಹಠ, ಸಾರ್ವಜನಿಕರಿಗೆ ಸಂಕಟ!!!

– ಚಾಂದ್ ಸಲ್ಮಾನ್ ಕರ್ನಾಟಕ ರಾಜ್ಯಾದ್ಯಂತ ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಇಂದು ನಿನ್ನೆಯ ವಿಚಾರವಲ್ಲ, ಇದರ ವಿಚಾರವಾಗಿ ಹಲವು ಬಾರಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ.ಕಳೆದ ಡಿಸೆಂಬರ್ ತಿಂಗಳಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಸುವ ಮುಖಾಂತರ ತಮ್ಮ ಬೇಡಿಕೆಗಳನ್ನು ನೌಕರರು ಸರ್ಕಾರದ ಮುಂದಿಟ್ಟಿದ್ದರು, ಸರ್ಕಾರವು ಬೇಡಿಕೆಗಳನ್ನು ಈಡೇರಿಸುವ ಆಶ್ವಾಸನೆ ನೀಡಿದ ಬಳಿಕ ಪ್ರತಿಭಟನೆಯನ್ನು ನೌಕರರು ಹಿಂಪಡೆದರು. ಆದರೆ ಇಂದು 3 ತಿಂಗಳು ಕಳೆದರೂ ಸರ್ಕಾರ ಸಾರಿಗೆ ನೌಕರರ ಬೇಡಿಕೆಗೆ ಇನ್ನಷ್ಟೂ ಸ್ಪಂದಿಸದ ಕಾರಣ ಪುನಃ ಮುಷ್ಕರ ಪ್ರಾರಂಭಗೊಂಡಿದೆ, ಈ … Continue reading ಸಾರಿಗೆ ನೌಕರರ ಬೇಡಿಕೆ ಈಡೇರಿಸದೆ, ಸರ್ಕಾರವು ಮಾಡುತ್ತಿರುವ ಹಠ, ಸಾರ್ವಜನಿಕರಿಗೆ ಸಂಕಟ!!!

ಸಾರಿಗೆ ನೌಕರರ ಮುಷ್ಕರಕ್ಕೆ ಕಾರಣವೇನು? ಏನಿದು 6 ನೇ ವೇತನ ಆಯೋಗ?

– ಉಮರ್ ಫಾರೂಕ್ ಬಾಗಲಕೋಟೆ ಕಳೆದ ಡಿಸೆಂಬರ್ ನಲ್ಲಿ ನಾಲ್ಕು ದಿನಗಳ ಕಾಲ ಇಡೀ ರಾಜ್ಯವನ್ನೇ ಸ್ತಬ್ಧಗೊಳಿಸಿದ್ದ ಸಾರಿಗೆ ನೌಕರರು, ಸರ್ಕಾರ ಕೊಟ್ಟ ಆಶ್ವಾಸನೆಯಿಂದ ಮುಷ್ಕರ ಹಿಂಪಡೆದಿದ್ದರು. ಸಾರಿಗೆ ನೌಕರರು ನೀಡಿದ್ದ ಗಡುವಿನೊಳಗೆ ಬೇಡಿಕೆ ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದರಿಂದ ಮತ್ತೊಮ್ಮೆ 6ನೇ ವೇತನ ಆಯೋಗದ ವರದಿಯನ್ವಯ ಶಿಫಾರಸು ಜಾರಿ ಮಾಡಬೇಕೆಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ನಿರ್ಧರಿಸಿದೆ. ಕಳೆದ ಡಿಸೆಂಬರ್ ವೇಳೆ ರಾಜ್ಯ ಸರ್ಕಾರ ಮತ್ತು ಸಾರಿಗೆ ನೌಕರರ ಕೂಟದೊಂದಿಗೆ ನಡೆದ ಸಂಧಾನ ಸಭೆಯಲ್ಲಿ ರಾಜ್ಯ ಸರ್ಕಾರ ಸಾರಿಗೆ ನೌಕರರ ಹತ್ತು ಬೇಡಿಕೆಗಳ ಪೈಕಿ 9 ಬೇಡಿಕೆ ಈಡೇರಿಸುವುದಾಗಿ … Continue reading ಸಾರಿಗೆ ನೌಕರರ ಮುಷ್ಕರಕ್ಕೆ ಕಾರಣವೇನು? ಏನಿದು 6 ನೇ ವೇತನ ಆಯೋಗ?

ನಿಂತು ನೋಡಿತ್ತು ಜಗತ್ತು !!

ಅಸ್ತಿತ್ವದ ಪ್ರಶ್ನೆಗೆ ಸನ್ನದ್ಧತೆಯೇ ಉತ್ತರ – ಭಾಗ 02 ಜಗತ್ತಿನಲ್ಲಿ ರಕ್ತ ಸಿಕ್ತ ಘಟನೆಗಳು ನಡೆಯಲು ಮುಖ್ಯ ಕಾರಣ ಅಲ್ಲಿ ಮೌನವಾಗಿ ನಿಂತು ನೋಡಿದ್ದ, ತಮಗೂ ಆ ಘಟನೆಗಳಿಗೂ ಏನೂ ಸಂಬಂಧವಿಲ್ಲವೆಂದು ವರ್ತಿಸಿದ ಬಹುಸಂಖ್ಯಾತ ನಾಗರಿಕರು, ವಿದ್ಯಾವಂತ, ಬುದ್ಧಿಜೀವಿ ಜನರಾಗಿದ್ದಾರೆ ಎಂದರೆ ತಪ್ಪಾಗಲಾರದು. ಸಮಾಜದಲ್ಲಿ ಅನ್ಯಾಯ, ಅಕ್ರಮ, ಅನೀತಿಗಳು ಮೇಲೈಸುವಾಗ ಅದರ ವಿರುದ್ಧ ಹೋರಾಡುವುದು, ಧ್ವನಿ ಮೊಳಗಿಸುವುದು, ಕನಿಷ್ಟ ಪಕ್ಷ ಆ ಘಟನೆಯನ್ನು ಮನಸ್ಸಿನಿಂದ ಖಂಡಿಸುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ. ಅಂದು ಜರ್ಮನಿಯಲ್ಲಿ 60 ಲಕ್ಷ ಯಹೂದಿಯರನ್ನು, ಅಸಂಖ್ಯಾತ ಕಮ್ಯುನಿಷ್ಟರನ್ನು, ಅಂಗವಿಕಲರನ್ನೂ ದಾರುಣವಾಗಿ ಹತ್ಯೆ ಮಾಡಿದ್ದರೂ ಜರ್ಮನಿಯಲ್ಲಿ ನಾಜಿ ಹಿಟ್ಲರನ ವಿರುದ್ಧ … Continue reading ನಿಂತು ನೋಡಿತ್ತು ಜಗತ್ತು !!